ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌: 4ಚಿನ್ನ, 1ಬೆಳ್ಳಿ ಗೆದ್ದ ಕುಸುಮಾ ಭೀಮಯ್ಯ

ಮೈಸೂರು:

ಮೈಸೂರು, ಮೇ.6  ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಲ್ಲಿ ಜಿಲ್ಲೆಯ ಮೂಲದ ಕುಸುಮಾ ಭೀಮಯ್ಯ ಅವರು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಗೆದ್ದು ಕೀರ್ತಿ ತಂದಿದ್ದಾರೆ. ಮೈಸೂರಿನ ಸ್ಪೋರ್ಟ್ಸ್‌ ಪಾರ್ಕ್‌ ನಲ್ಲಿ ಫಿಟ್‌ ನೆಸ್‌ ಮತ್ತು ಏರೋಬಿಕ್ಸ್‌ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ಕುಸುಮಾ ಅವರು 400 ಮೀಟರ್‌ , 800 ಮೀಟರ್‌ , 4×400 ಮತ್ತು 4×1000 ಮೀಟರ್‌ ರಿಲೇ ಒಟದಲ್ಲಿ ಚಿನ್ನದ ಪದಕ ಗಳಿಸಿದ್ದು 200 ಮೀಟರ್‌ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ

ಚೆನ್ನೈನಲ್ಲಿ ಕಳೆದ ವಾರ ನಡೆದ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ನಲ್ಲಿ 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಭಾಗವಹಿಸಿ ಈ ಗೆಲುವು ದಾಖಲಿಸಿದ ಕುಸುಮಾ ಅವರು ಈ ಗೆಲುವಿನ ಮೂಲಕ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಅಂತ್ರ್ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ. ಉತ್ತಮ ಕ್ರೀಡಾಪಟು ಅಗಿರುವ ಕುಸುಮಾ ಅವರು ಈ ಹಿಂದೆ ಮಲೇಷ್ಯಾದಲ್ಲಿ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ನಲ್ಲಿ ಮೂರು ಚಿನ್ನದ ಪದಕ ಗಳಿಸಿದ್ದರು.

ಜಾನುವಾರುಗಳ ಆಯಂಬುಲೆನ್ಸ್‌ : ನಾಳೆ ಚಾಲನೆ

ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಮುಂದಿನ ಗುರಿ ಅಂತರ್ರಾಷ್ಟ್ರೀಯ ಅಥ್ಲೆಟಿಕ್ಸ್‌ ನಲ್ಲಿ 200, 400 ಮತ್ತು 800 ಮತ್ತು 4×100 ರಿಲೇ ಓಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ಆಗಿದ್ದು ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತಿದ್ದೇನೆ ಎಂದರು.

 ರಾಜ್ಯದ ಶಾಲೆಗಳಲ್ಲಿ ಪುಸಕ್ತ ಶೈಕ್ಷಣಿಕ ವರ್ಷದಿಂದಲೇ `ಭಗವದ್ಗೀತೆ’ ಬೋಧನೆ!

ಮೂಲತಃ ಮೂರ್ನಾಡು ಸಮೀಪದ ಬೇತ್ರಿ ಬಾಡಗ ಗ್ರಾಮದ ಕಂಬೀರಂಡ ಕಿಟ್ಟು ಕಾಳಪ್ಪ ಮಾಸ್ಟರ್‌ ಅವರ ಪುತ್ರಿ ಆಗಿದ್ದು ಭೀಮಯ್ಯ ಅವರನ್ನು ವಿವಾಹವಾಗಿದ್ದಾರೆ. ಇವರ ಪತಿ ಭೀಮಯ್ಯ ಅವರು ಕೂಡ ಕ್ರೀಡಾಪಟು ಆಗಿದ್ದು ಗೋಣಿಕೊಪ್ಪದ ಕಾಪ್ಸ್‌ ಶಾಲೆಯಲ್ಲಿ 20 ವರ್ಷಗಳ ಕಾಲ ಕ್ರೀಡಾ ತರಬೇತುದಾರರಾಗಿ ಕೆಲಸ ಮಾಡಿದ್ದು ಈಗ ಮೈಸೂರಿನಲ್ಲಿ ತರಬೇತುದಾರರಾಗಿದ್ದಾರೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link