ಚಿಕ್ಕಬಿದಿರೆ ರಸ್ತೆ ಸರಿಪಡಿಸಲು ಆಗ್ರಹ

ಹುಳಿಯಾರು:

    ಹುಳಿಯಾರು ಹೋಬಳಿ ಚಿಕ್ಕಬಿದರೆ ಗ್ರಾಮದ ಒಳಗಡೆ ಹೋಗುವ 100 ಮೀಟರಿನಷ್ಟು ಉದ್ದದ್ದ ರಸ್ತೆ ಮಣ್ಣು ಕಲ್ಲಿನಿಂದ ತುಂಬಿ ಕೊರಕಲು ಬಿದ್ದು ಹಾಳಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ.

     ಕೇವಲ ಮಣ್ಣು ಮತ್ತು ಕಲ್ಲಿನಿಂದ ಕೂಡಿರುವ ರಸ್ತೆ ಗುಂಡಿ ಬಿದ್ದಿದ್ದು ವಾಹನ ಸವಾರರಂತೂ ಎಲ್ಲಿ ಬೀಳುತ್ತೇವೆಯೋ ಎಂದು ಎಚ್ಚರಿಕೆಯಿಂದ ಸಂಚರಿಸುವಂತಾಗಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದರು ಈ ಗ್ರಾಮ ನಿರ್ಲಕ್ಷಕ್ಕೆ ಒಳಗಾಗಿದೆ. ರಸ್ತೆಯಲ್ಲಿರುವ ಗುಂಡಿ ಮುಚ್ಚುವ ಕೆಲಸ ಸಹ ಮಾಡದೆ ನಿರ್ಲಕ್ಷ್ಯವಹಿಸಿದ್ದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

     ಈಗ ಮಳೆಗಾಲ ಶುರುವಾಗಿದ್ದು ಜೋರುಮಳೆಯಲ್ಲಿ ಇನ್ನಷ್ಟು ಮಣ್ಣು ಕೊಚ್ಚಿ ಕೊರಕಲು ಹೆಚ್ಚಾಗಿ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಅಪಾಯಕ್ಕೆ ಆಹ್ವಾನಿಸಿದಂತೆ. ಡಾಂಬರು ರಸ್ತೆ ಅಥವಾ ಸಿಸಿ ರಸ್ತೆ ಮಾಡಿದಲ್ಲಿ ಅನುಕೂಲವಾಗುತ್ತದೆ. ಅವಘಡ ಸಂಭವಿಸುವ ಮುನ್ನ ಎಚ್ಚೆತ್ತು ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap