ಬೆಂಗಳೂರು
ಮದ್ಯ ಸೇವನೆಗೆ ಹಣ ನೀಡದ ತಾಯಿಗೆ ಮಗ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ತಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಳೆದ ಡಿ.6ರಂದು ತಾಯಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆ ನಡೆಯುತ್ತಿದ್ದಂತೆ ಸಂತ್ರಸ್ತೆ ಭಾರತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಎದೆ, ಹೊಟ್ಟೆ ಭಾಗಕ್ಕೆ ತೀವ್ರ ಸುಟ್ಟ ಗಾಯಗಳಾಗಿದ್ದ ಕಾರಣ ಕಳೆದ 20 ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.ಆದರೆ, ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕುಡಿಯಲು ಹಣ ನೀಡಲಿಲ್ಲವೆಂದು ಹೆತ್ತ ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಗ ಅಶ್ವತ್ಥ ನಗರದ ನಿವಾಸಿ ಉತ್ತಮ್ (24)ನನ್ನು ಸದಾಶಿವನಗರ ಪೆಲೀಸರು ಬಂಧಿಸಿದ್ದ ಈಗ ಆತನ ಮೇಳೆ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.
ಮೊಬೈಲ್ ಕಳವು
ಗ್ರಾಹಕರ ಸೋಗಿನಲ್ಲಿ ಮೊಬೈಲ್ ಅಂಗಡಿಗೆ ಬಂದು ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡಿರುವ ಘಟನೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಲಮಂಗಲದ ಜಯನಗರದ ಲಾವಣ್ಯ ಮೊಬೈಲ್ಸ್ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬುಧವಾರ ಸಂಜೆ ಬಂದು ಮೊದಲು ಇಯರ್ ಫೋನ್ ಕೇಳಿ, ಅಂಗಡಿಯಲ್ಲಿದ್ದವರ ಗಮನ ಬೆರೆಡೆ ಸೆಳೆಯುವಂತೆ ಮಾಡಿದ್ದಾನೆ. ಬಳಿಕ ಟೇಬಲ್ ಮೇಲಿದ್ದ ದುಬಾರಿ ಬೆಲೆಯ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದಾನೆ.ಮೊಬೈಲ್ ನಾಪತ್ತೆಯಾಗಿರುವುದನ್ನು ಅರಿತು, ಅಂಗಡಿಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಕಳ್ಳನ ಕರಾಮತ್ತು ಬಯಲಾಗಿದೆ. ಕೂಡಲೇ ಅಂಗಡಿ ಮಾಲೀಕರು ಪೆಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಲೇಜು ವಿದ್ಯಾರ್ಥಿಯ ನೆಪದಲ್ಲಿ ಬಂದ ಕಳ್ಳ ಇಯರ್ ಫೋನ್ ಕೇಳಿದ್ದ. ಬಳಿಕ ಅಂಗಡಿಯಲ್ಲೇ ಸುಮಾರು 20 ನಿಮಿಷ ನಿಂತಿದ್ದ. ತೆಲುಗು ಮಿಶ್ರಿತ ಕನ್ನಡ ಮಾತನಾಡುತ್ತಿದ್ದು, ಅಂಗಡಿಯಲ್ಲಿದ್ದವರ ಗಮನ ಬೆರೆಡೆ ಸೆಳೆದು ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಕಳ್ಳನು ಓಜಿಕುಪ್ಪಂ ತಂಡದ ಸದಸ್ಯನೆಂದು ಅನುಮಾನ ಮೂಡುತ್ತಿದೆ ಎಂದು ಅಂಗಡಿ ಮಾಲೀಕ ವರದರಾಜ್ ತಿಳಿಸಿದ್ದಾರೆ ನೆಲಮಂಗಲ ಪಟ್ಟಣ ಪೆಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/10/firegenericweb.gif)