ಪಾವಗಡ
ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಹಾಗೂ ಸಂವಿಧಾನವನ್ನು ರಚನೆ ಮಾಡುವಲ್ಲಿ ಅತ್ಯಂತ ಶ್ರಮವಹಿಸಿದ ಹಾಗೂ ಭಾರತದ ಪರಮೋಚ್ಚ ವ್ಯಕ್ತಿ, ದೀನ-ದಲಿತರ ಆಶಾಕಿರಣ ಡಾ. ಬಿ. ಆರ್. ಅಂಬೇಡ್ಕರ್ ಎಂದು ಛಲವಾದಿ ಕ್ಷೇಮಾಭಿವೃದ್ದಿ ಸಂಘದ ತಾ. ಅಧ್ಯಕ್ಷ ಪಳವಳ್ಳಿ ಕನುಮಪ್ಪ ತಿಳಿಸಿದರು.
ಪಾವಗಡ ತಾಲ್ಲೂಕು ಛಲವಾದಿ ಕ್ಷೇಮಾಭಿವೃದ್ದಿ ಸಂಘದಿಂದ ಹಮ್ಮಿಕೊಂಡಿದ್ದ ಭಾರತ ಸಂವಿಧಾನದ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ರವರ 128 ನೇ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಟೋಲ್ ಗೇಟ್ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ, ನಂತರ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಕಣಿವೇನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿ ವೃದ್ದಾಶ್ರಮದ ಹಿರಿಯರಿಗೆ ಹಣ್ಣು, ಹಂಪಲು ವಿತರಿಸಿ ಮಾತನಾಡಿದರು.
ಮುಖಂಡ ಕರೇಕ್ಯಾತನಹಳ್ಳಿ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಒಂದು ಜಾತಿ ಸೀಮಿತವಾದ ವ್ಯಕ್ತಿ ಅಲ್ಲ. ಎಲ್ಲಾ ಸಮುದಾಯದವರಿಗೂ ಸಮಾನಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.ಪುರಸಭಾ ಮಾಜಿ ಸದಸ್ಯ ಎಲ್. ವಸಂತ್ ಕುಮಾರ್, ವಕೀಲ ರವೀಂದ್ರ ಕುಮಾರ್, ಪ್ರಧಾನಕಾರ್ಯದರ್ಶಿ ವದನಕಲ್ ರಂಗಸ್ವಾಮಿ ಹಾಜರಿದ್ದರು.
ನಾಯಕ ನೌಕರ ಸಂಘದಿಂದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಡಿ.ಸಿ.ಸಿ.ಬ್ಯಾಂಕ್ ಸೀನಪ್ಪ, ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷ ಪಾಳ್ಳೆಗಾರ ಲೋಕೇಶ್, ನಿರ್ದೇಶಕರಾದ ಕಾಮಯ್ಯ, ಆನಂದಪ್ಪ, ದುರ್ಗಮ್ಮ, ಮಾರುತೇಶ್, ಬಸವರಾಜು, ನರಸಿಂಹಪ್ಪ, ಬಸವಲಿಂಗಪ್ಪ, ರಾಧಾಕೃಷ್ಣ, ಅಶ್ವತ್ಥ್, ರಾಮಯ್ಯ ಹಾಜರಿದ್ದರು.
ಪಟ್ಟದ ಆದರ್ಶ ನಗರದ ಸುಮುದಾಯಭವನದಲ್ಲಿ ಸ್ವಾಭಿಮಾನಿ ಬಳಗದಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ದಲಿತ ಮುಖಂಡರಾದ ಮುತ್ತುರಾಯಪ್ಪ, ಕೃಷ್ಣಪ್ಪ, ವಿಜಯ್ ಕುಮಾರ್,ನಾಗರಾಜ್, ತೇಜಸ್ವಿನಿ, ಮುತ್ಯಾಲಕ್ಕ, ರಾಮು, ಮಂಜುನಾಥ್, ನಾಗರಾಜ್ ಹಾಜರಿದ್ದರು.
ತಾಲ್ಲೂಕು ತಮಟೆ ಸಂಸ್ಥೆಯಿಂದ ಅಂಬೇಡ್ಕರ್ ಜಯಂತಿಯನ್ನು ಪಟ್ಟಣದ ಪತಂಜಲಿನಗರದ ಕಚೆರಿಯಲ್ಲಿ ಆಚರಿಸಲಾಯಿತು. ರಾಜ್ಯಾಧ್ಯಕ್ಷರಾದ ಓಬಳೇಶ್, ತಾ. ಅಧ್ಯಕ್ಷ ಕಡಮಲಕುಂಟೆ ಸುಬ್ಬರಾಯಪ್ಪ ಮತ್ತಿತರರಿದ್ದರು.
ಸಮಾಜಕಲ್ಯಾಣ ಇಲಾಖೆಯಿಂದ ಪಟ್ಟಣದ ತಹಸೀಲ್ದಾರ್ ಕಚೆರಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಪ್ರಕಾಶ್, ಸಮಾಜಕಲ್ಯಾಣಾಧಿಕಾರಿ ಶಿವಣ್ಣ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಜಿ.ಪಂ. ಎ.ಇ.ಇ. ಈಶ್ವರಪ್ಪ, ಬಿ.ಇ.ಒ. ಸಿದ್ದಗಂಗಯ್ಯ ಹಾಜರಿದ್ದರು.
ಪಳವಳ್ಳಿಯ ಪಲ್ಲವರಾಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಅಚರಿಸಲಾಯಿತು. ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್ ಮತ್ತು ಶಿಕ್ಷಕರುಗಳು ಹಾಜರಿದ್ದರು. ಪಾವಗಡ ಪುರಸಭಾ ಕಾರ್ಯಾಲಯದಿಂದ ಟೋಲ್ ಗೇಟ್ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
