ಗುಣಾತ್ಮಕ ಶಿಕ್ಷಣ ಪಡೆದು ಸತ್ಪ್ರಜೆಗಳಾಗಲು ಕರೆ

ಗುಬ್ಬಿ
   
    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯುವ ಮೂಲಕ ಸಮಾಜದ ಸತ್ಪ್ರಜೆಗಳಾಗಿ ರೂಪುಗೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಫೈರೋಜಾ.ಎಚ್.ಉಕ್ಕಲಿ ವಿಷಾದಿಸಿದರು.
 
         ಪಟ್ಟಣದ ಎಸ್‍ಸಿಎಸ್ ಕಲ್ಯಾಣ ಮಂಟಪದಲ್ಲಿ ಶ್ರೀರಾಮ್ ಫೌಂಡೇಷನ್ ಆಯೋಜಿಸಿದ್ದ ಬಡವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣ ದುಡಿಮೆಗೆ ಮಾನ್ಯತೆ ನೀಡುತ್ತಾ ನೈತಿಕತೆಯ ಅಂಶವನ್ನು ಮರೆತಿದ್ದಾರೆ. ಪಾಶ್ಚಿಮಾತ್ಯ ಸಂಸ್ಕøತಿ ಅನುಸರಣೆಯಲ್ಲಿ ನಮ್ಮ ಪರಂಪರೆ ಮರೆಮಾಚಿದೆ ಎಂದು ವಿಷಾದಿಸಿದರು.
        ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಜನಾಂಗ ಗುರು ಹಿರಿಯರನ್ನು ಮರೆಯುತ್ತಿದ್ದಾರೆ. ತಂದೆತಾಯಿಯರನ್ನು ಕಡೆಗಣಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಫ್ಯಾಷನ್ ಆಗಿದೆ. ಅವಿಭಕ್ತ ಕುಟುಂಬದಿಂದ ಒಡೆದ ವಿಭಕ್ತ ಕುಟುಂಬಗಳು ಸಂಕುಚಿತ ಮನೋಭಾವನೆ ಬೆಳೆಸಿಕೊಡುತ್ತಿದೆ. ಮುಂದಿನ ಪೀಳಿಗೆಯಲ್ಲಿ ನಮ್ಮ ಸಂಸ್ಕøತಿ ಕಾಣದಂತಾಗುತ್ತದೆ ಎಂದರು.
 
         `ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಸಂಸ್ಕಾರ ಮರೆತ ಯುವ ಜನಾಂಗ ಮೌಲ್ಯ ಶಿಕ್ಷಣವನ್ನು ಕಲಿಯುತ್ತಿಲ್ಲ. ಪಠ್ಯ ಕಲಿಕೆಯಷ್ಟೇ ಸಮಾಜದ ಎಲ್ಲಾ ಆಯಾಮವನ್ನು ತಿಳಿಯುವುದು ಅಗತ್ಯವಿದೆ. ಆಧುನಿಕತೆಯ ಹೆಸರಿನಲ್ಲಿ ನಮ್ಮ ಪರಂಪರೆ ನಾಪತ್ತೆಯಾಗಿದೆ. ನಾವು ಬೆಳೆದು ಸಮಾಜವನ್ನು ಬೆಳೆಸುವ ಮನೋಭಾವ ಕಲಿಯುವ ಶಿಕ್ಷಣ ಎಲ್ಲರಿಗೂ ತಿಳಿಸಬೇಕಿದೆ ಎಂದರು.
          ತಹಸೀಲ್ದಾರ್ ಜಿ.ವಿ.ಮೋಹನ್‍ಕುಮಾರ್ ಮಾತನಾಡಿ ಶಿಕ್ಷಣ ಪಡೆದ ಯುವಕರು ಉದ್ಯೋಗಕ್ಕೆ ಸರ್ಕಾರವನ್ನು ಅವಲಂಬಿಸಿದೆ ಸ್ವಯಂ ಉದ್ಯೋಗದತ್ತ ಧಾವಿಸಬೇಕು. ಸರ್ಕಾರದ ಹಲವು ಯೋಜನೆಗಳಿಗೆ ಜೋತು ಬೀಳದೆ ಸಾಮಾಜಿಕ ಕಳಕಳಿ ಹೊತ್ತ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವಂತೆ ಕರೆ ನೀಡಿದರು.
         ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಪತ್ರಿಭಾ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಗಣೇಶ್, ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಷಡಕ್ಷರಿ, ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಸಿಇಒ ಸುದರ್ಶನ್.ಬಿ.ಹೊಳ್ಳ, ಅಧ್ಯಕ್ಷ ಶ್ರೀಧರ್ ಮಠಮ್, ಗುಬ್ಬಿ ಶಾಖೆಯ ಟಿ.ಆರ್.ರಾಘವೇಂದ್ರ, ಹೇಮನ್‍ಗೌಡ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link