ದಾವಣಗೆರೆ:
ಕೊರೊನಾ ಸೋಂಕಿಗೆ ತುತ್ತಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೋಂಕಿನಿಂದ ಗುಣಮುಖರಾಗಿ ಬೇಗ ಚೇತರಿಸಿಕೊಂಡು ಬರಲಿ ಎಂದು ಹಾರೈಸಿ ನಗರದ ವಿವಿಧ ದೇವಸ್ಥಾನ, ದರ್ಗಾಗಳಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ವಿಶೇಷ ಪೂರ್ಜೆ, ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿನ ನಗರ ದೇವತೆ ಶ್ರೀದುರ್ಗಾಂಬಿಕಾದೇವಿ ದೇವಸ್ಥಾನ, ನಗರದ ಹೊರವಲಯದ ಶಾಮನೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಇತರೆಡೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರೆ, ಹೊಂಡದ ಸರ್ಕಲ್ನ ಸೈಯದ್ ಖಡಕ್ ಷಾವಲಿ ದರ್ಗಾದಲ್ಲಿ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕೊರೊನಾ ಸೋಂಕಿನ ಆರಂಭದಿಂದಲೂ ಇಲ್ಲಿವರೆಗೂ ಜನರಿಗೆ ನೆರವು ನೀಡುತ್ತಾ ಬಂದ, ನಿರಂತರ ಜನರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಜನರೊಂದಿಗೆ ಬೆರತವರು. ಸೋಂಕಿನಿಂದ ಶೀಘ್ರವೇ ಗುಣಮುಖರಾಗಿ ಬರುವಂತೆ ಅವರುಗಳ ಮೇಲೆ ದೇವರ ಅನುಗ್ರಹ ಇರಲಿ ಎಂದು ಪ್ರಾರ್ಥಿಸಿದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ ಮಾತನಾಡಿ, ನಮ್ಮ ನಾಯಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್ .ಮಲ್ಲಿಕಾರ್ಜುನ ಆರೋಗ್ಯವಾಗಿದ್ದು, ಲವಲವಿಕೆಯಿಂದ ಇದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಹರಿಸುವಷ್ಟೇ ಗಮನನಗರ, ಜಿಲ್ಲೆಯ ಜನರ ಬಗ್ಗೆಯೂ ತೋರುತ್ತಿದ್ದಾರೆ. ಸಾರ್ವಜನಿಕರೂ ಸಹ ಕೊರೋನಾ ಬಗ್ಗೆ ಜಾಗ್ರತೆ ವಹಿಸುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಗೌಡ್ರು ಚನ್ನಬಸಪ್ಪ, ಸೊಪ್ಪಿನ ಗುರುರಾಜ, ಹನುಮಂತರಾವ್ ಸಾವಂತ್, ಎಚ್.ಬಿ.ಗೋಣೆಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ, ಸದಸ್ಯರಾದ ದೇವರಮನಿ ಶಿವಕುಮಾರ, ಜಿ.ಎಸ್.ಮಂಜುನಾಥ ಗಡಿಗುಡಾಳ್, ಜೆ.ಎನ್.ಶ್ರೀನಿವಾಸ, ಸೈಯದ್ ಚಾರ್ಲಿ, ಚಮನ್ ಸಾಬ್, ಜಿ.ಡಿ.ಪ್ರಕಾಶ, ಸುಧಾ ಮಂಜುನಾಥ, ಆಶಾ ಉಮೇಶ, ದೂಡಾ ಮಾಜಿ ಅಧ್ಯಕ್ಷರುಗಳಾದ ಮಾಲತೇಶ ಪೈಲ್ವಾನ್, ಅಯೂಬ್ ಪೈಲ್ವಾನ್, ಮುಖಂಡರಾದ ಎಂ.ಮಂಜುನಾಥ, ಎಸ್.ಎನ್.ಚಂದ್ರಪ್ಪ, ಬೆಳ್ಳೂಡಿ ಮಂಜುನಾಥ, ಸೀಮೆಣ್ಣೆ ಪರಮೇಶ, ಕೆ.ಎಲ್. ಹರೀಶ ಬಸಾಪುರ, ಎಸ್.ಕೆ.ಪ್ರವೀಣಕುಮಾರ, ಎಲ್.ಎಂ.ಎಚ್.ಸಾಗರ, ರಾಕೇಶ, ಯುವರಾಜ, ಚಂದ್ರು ಡೋಲಿ, ಜಮ್ಮನಹಳ್ಳಿ ನಾಗರಾಜ, ಆನಂದ, ಕವಿರಾಜ, ಶುಭಮಂಗಳ, ದಾಕ್ಷಾಯಣಮ್ಮ, ಮಂಜುಳಾ, ರಾಜೇಶ್ವರಿ, ವಿಜಯಲಕ್ಷ್ಮಿ, ಉದಯ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
