ಸಾಂಸ್ಕೃತಿಕ ಲೋಕದಲ್ಲಿನ ಅಸಮಾನತೆ ತೊಲಗಲಿ

ದಾವಣಗೆರೆ:

          ಸಾಂಸ್ಕತಿಕ ಲೋಕದಲ್ಲಿ ಮನೆ ಮಾಡಿರುವ ವಿರೋಧಭಾಸ, ತಾರತಮ್ಯ ಹಾಗೂ ಅಸಮಾನತೆ ತೊಲಗಬೇಕೆಂದು ರಂಗಭೂಮಿ ಕಥಾ ಕೀರ್ತನಾಕಾರ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕತ ಡಾ.ಲಕ್ಷ್ಮಣದಾಸ್ ತಿಳಿಸಿದರು.

         ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹವ್ಯಾಸಿ ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬಯಲಾಟ ಉತ್ಸವ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

         ಜಾನಪದ ಹಾಗೂ ಬಯಲಾಟ ಕಲಾವಿದರು ಅಹೋರಾತ್ರಿ ಹಾಡಿದರೂ ಕೇವಲ 500 ರೂ. ಸಂಭಾವನೆಯೂ ಸಿಗಲ್ಲ. ಆದರೆ, ಒಂದು ವೀಣೆ ಹಾಗೂ ಮೃದಂಗ ಇಟ್ಟುಕೊಂಡು ಸಂಗೀತ ಕಚೇರಿ ನಡೆಸುವವರಿಗೆ ಐಷಾರಾಮಿ ಹೋಟೆಲ್‍ಗಳಲ್ಲಿ ಕೊಠಡಿ ವ್ಯವಸ್ಥೆ ಹಾಗೂ ದಿನಕ್ಕೆ ಒಂದೂವರೆ ಲಕ್ಷ ರೂ. ಸಂಭಾವನೆ ದೊರೆಯುತ್ತಿದೆ. ಸಾಂಸ್ಕತಿಕ ಲೋಕದಲ್ಲಿ ಈ ವಿರೋಧಭಾಸ, ತಾರತಮ್ಯ, ಅಸಮಾನತೆ ಏಕೆ ಎಂದು ಪ್ರಶ್ನಿಸಿದ ಅವರು, ಇದನ್ನು ಹೋಗಲಾಡಿಸಲು ಸರ್ಕಾರ ಮೊದಲು ಪ್ರಯತ್ನಿಸಬೇಕೆಂದು ಆಗ್ರಹಿಸಿದರು.

         ಹಿಂದೆ ದೃಶ್ಯ ಮಾಧ್ಯಮಗಳ ಪ್ರಭಾವ ಕಡಿಮೆ ಇತ್ತು. ಹೀಗಾಗಿ ಯಾವುದಾದರು ಒಂದು ಊರಿನಲ್ಲಿ ಹರಿಕಥೆ, ಬಯಲಾಟ, ನಾಟಕ ಪ್ರದಶ್ನಗೊಂಡರೆ, ಸಾವಿರಾರರು ಜನರು ಸೇರುತ್ತಿದ್ದರು. ಆದರೆ, ಇಂದು ಕಲೆಯನ್ನು ಉಳಿಸಿ ಬೆಳೆಸುತ್ತೇವೆಂದು ಸರ್ಕಾರ ಸಏರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರಯತ್ನಿಸುತ್ತಿದ್ದರೂ ರಂಗಭೂಮಿ, ಜನಪದ ಲೋಕಕ್ಕೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

          ಜನಪದ ಲೋಕಕ್ಕೆ ತನ್ನದೇಯಾದ ಅಸ್ಮಿತೆ ಇದ್ದು, ಹಿಂದೆ ಗುರುಕುಲಗಳಿಗೆ ನೃತ್ಯ ಕಲೆಯಲು ಬರುತ್ತಿದ್ದ ಹುಡುಗರನ್ನು, ಗುರುಗಳು ಸಾಂಸ್ಕತಿಕ ಲೋಕದಲ್ಲಿ ಏನೇನಿದೆ ಎಂಬುದನ್ನು ಅರ್ಥ ಮಾಡಿಸಲಿಕ್ಕಾಗಿ ಅಲೆದಾಡಿಸುತ್ತಿದ್ದರು. ಜನಪದ ತಾಯಿ ಹಾಡು ಹಾಡುತ್ತಲೇ, ಜನಪದ ಲೋಕವನ್ನು ಕಟ್ಟಿದ್ದು, ಇದೊಂದು ಅಲಿಖಿತ ಸಾಹಿತ್ಯವಾಗಿದ್ದು, ಇಡೀ ಜಗತ್ತಿನ ಸಾರಸ್ವತ ಮತ್ತು ಸಾಂಸ್ಕøತಿಕ ಲೋಕವನ್ನು ಜನಪದ ಹಿಡಿದಿಟ್ಟಿದೆ ಎಂದರು.

         ಜನಪದ ಕಲಾವಿದರ ನೂರಾರು ಸಂಕಟ, ನೋವುಗಳಿಗೆ ತುತ್ತಾಗಿದ್ದಾರೆ. ಹಲವರು ಮನೆ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದ ಕಾರಣ ಬೀದಿ ಹೆಣ ಸಹ ಆಗಿದ್ದಾರೆ. ಆದ್ದರಿಂದ ಇವರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಅವಶ್ಯ ಕತೆ ಇದೆ. ಹಲವು ಕಲಾವಿದರಿಗೆ ಬಡತನವೇ ಉಸಿರಾಗಿದ್ದು, ಕಲಾವಿದರು ಯಾವುದೇ ಕಾರಣಕ್ಕೂ ವಿಚಲಿತರಾಗದೇ, ವಿನಯವಂಥರು ಮತ್ತು ಸ್ವಾಭಿಮಾನಿಗಳಾಗಿ ಮಾತನಾಡುವುದನ್ನು ಕಲಿಯಬೇಕೆಂದು ಸಲಹೆ ನೀಡಿದರು.

        ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾತನಾಡಿ, ಎಲ್ಲಾ ವಿವಿಧ ಕಲಾವಿದರ ತಾಯಿಬೆರು ಜನಪದ ಲೋಕವಾಗಿದ್ದು, ಜನಪದ ಕಲಾವಿದರು ಮಾತ್ರ ಸಮಾಜದ ಅಂಕು, ಡೊಂಕನ್ನು ಯಶಸ್ವಿಯಾಗಿ ತಿದ್ದಲು ಸಾಧ್ಯವಾಗಲಿದೆ. ಕಲೆಗೆ ಭವಿಷ್ಯ ಇರುವ ಕಾರಣ ಎಷ್ಟೇ ಕಷ್ಟ ಬಂದರೂ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಇಂದಿನ ಪೀಳಿಗೆಯಲ್ಲಿ ಜನಪದ ಕಥೆ, ಕಲೆಗಳ ಬಗ್ಗೆ ಅರಿವು ಇಲ್ಲದ ಕಾರಣ ಕಲಾ ಆಸಕ್ತಿ ಕಡಿಮೆಯಾಗಿದೆ. ಆದ್ದರಿಂದ ಮಕ್ಕಳಲ್ಲಿ ಜನಪದದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.

         ಈ ಸಂದರ್ಭದಲ್ಲಿ ಯುವ ಸಾಹಿತಿ ಎಂ.ಬಸವರಾಜ್ ಅವರಿಗೆ ಕಾಯಕ ಜೀವಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಚನ್ನಗಿರಿ ಹಿರೇಮಠದ ಶ್ರೀಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹರಿಹರ ಕಸಾಪ ಕೋಶಾಧ್ಯಕ್ಷ ಕೆ.ಎನ್.ಹನುಮಂತಪ್ಪ, ಕಲಾಪೋಷಕ ಬಿ.ಓ.ಜಂಬುನಾಥ್ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ಎನ್.ಎಸ್.ರಾಜು ಸ್ವಾಗತಿಸಿದರು. ಸಾಹಿತಿ ತೆಲಿಗಿ ವೀರಭದ್ರಪ್ಪ ನಿರೂಪಿಸಿದರು. ಪಿ.ಖಾದರ್ ಪ್ರಶಸ್ತಿಪತ್ರ ಓದಿದರು. ವೇದಿಕೆ ಕಾರ್ಯಕ್ರಮದ ನಂತರ ಬಂಗಾರಕ್ಕನ ಗುಡ್ಡದ ಕಲಾವಿದರು “ಕರಿಬಂಟನ ಕಾಳಗ” ಬಯಲಾಟ ಪ್ರದರ್ಶಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link