ದಾವಣಗೆರೆ
ಏ.10 ರಂದು ಸಾರ್ವತ್ರಿಕ ಲೋಕಸಭಾ ಚುನಾವಣೆ-2019 ನೀತಿ ಸಂಹಿತೆ ಪ್ರಯುಕ್ತ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮುಷ್ಟೂರು ತನಿಖಾ ಠಾಣೆ ಹತ್ತಿರ ನಿಯಮ ಉಲ್ಲಂಘಿಸಿ ಮದ್ಯ ಮತ್ತು ಬಿಯರ್ನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಇವರ ಮಾರ್ಗದರ್ಶನದಲ್ಲಿ ಹಾಗೂ ಜಗಳೂರು ತಾಲ್ಲೂಕು ತಹಶೀಲ್ದಾರ್ ಇವರ ನೇತೃತ್ವದಲ್ಲಿ ಹರಿಹರ ಉಪ ವಿಭಾಗದ ಉಪ ಅಧೀಕ್ಷಕರಾದ ಸಿ.ಎನ್ ಜಸಾಯಿ ಮತ್ತು ಹರಿಹರ ಅಬಕಾರಿ ಸಬ್ ಇನ್ಸಪೆಕ್ಟರ್ ಈರಪ್ಪ ಮಾರಂಬೀಡ್ ಹಾಗೂ ಸಿಬ್ಬಂದಿಗಳು ಕ್ರಮವಾಗಿ 8,970 ಲೀಟರ್ ಬಿಯರ್ ಹಾಗೂ 4,620 ಲೀಟರ್ ಮದ್ಯ ಜಪ್ತುಪಡಿಸಿ ಇಬ್ಬರು ಲಾರಿ ಚಾಲಕರನ್ನು ಬಂಧಿಸಿ ಮೊಕದ್ದೆಮೆ ದಾಖಲಿಸಿರುತ್ತಾರೆ. ಈ ಮುದ್ದೆ ಮಾಲಿನ ಅಂದಾಜು ಮೌಲ್ಯ ರೂ. 30.13 ಲಕ್ಷ ರೂಪಾಯಿಗಳಾಗಿದ್ದು, ಲಾರಿ ವಾಹನಗಳ ಅಂದಾಜು ಮೌಲ್ಯ ರೂ. 38 ಲಕ್ಷಗಳಾಷ್ಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/madya-vasha.gif)