ದಾವಣಗೆರೆ
ಬಾಲ ಕಾರ್ಮಿಕ(ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986 ಹಾಗೂ 2016 ರ ತಿದ್ದುಪಡಿ ಕಾಯ್ದೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜ.31 ರ ಇಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ಓ ಬಾಲ ಕಾರ್ಮಿಕ’ ಎಂಬ ಬೀದಿ ನಾಟಕಕ್ಕೆ ಸಹಾಯಕ ಕಾರ್ಮಿಕ ಆಯುಕ್ತರಾದ ಮಹಮ್ಮದ್ ಜಾಹಿರ್ ಬಾಷಾ ಇವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಯೋಜನಾ ನಿರ್ದೇಶಕ ಇ.ಎನ್.ಪ್ರಸನ್ನ, ನಿರೀಕ್ಷಕರಾದ ರಾಜಪ್ಪ, ವೇಮಣ್ಣ, ಮಮ್ತಾಜ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸುವರ್ಣ ಕರ್ನಾಟಕ ಜನಜಾಗೃತಿ ಕಲಾ ಸಂಘ, ಚನ್ನಗಿರಿ ಈ ತಂಡವು ಈ ಬೀದಿ ನಾಟಕ ಪ್ರದರ್ಶಿಸಿದ್ದು, ಈ ತಂಡ ಜಿಲ್ಲಾದ್ಯಂತ ಸಂಚರಿಸಿ ಬಾಲ ಕಾರ್ಮಿಕ ಕಾಯ್ದೆ ಕುರಿತು ಅರಿವು ಮೂಡಿಸಲಿದೆ ಎಂದು ಸಹಾಯಕ ಕಾರ್ಮಿಕ ಅಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
