ಚನ್ನಗಿರಿ:
ಉಪ್ಪಾರ ಸಮಾಜದಲ್ಲಿ ಬದಲಾವಣೆ ಆಗಬೇಕಾದರೆ, ಶಿಕ್ಷಣದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮೊದಲು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ಮಕ್ಕಳನ್ನು ಉತ್ತಮ ನಾಗರೀಕರರನ್ನಾಗಿಸಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ತಾಲೂಕಿನ ಹಿರೇಮಳಲಿ ಗ್ರಾಮದಲ್ಲಿ ಭಗೀರಥ ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಿ ಶಿಕ್ಷಣ ಇಲ್ಲವೋ ಅಲ್ಲಿ ಮೌಢ್ಯತೆ ಹೆಚ್ಚಾಗಿರುತ್ತದೆ, ನಿರಂತರ ಕಲಿಕೆಯಿಂದ ಸಂವಹನ ಸುಲಭವಗುವ ಜೊತೆಗೆ ಬದುಕನ್ನು ಕಟ್ಟಿಕೊಳ್ಳಬಹುದು. ಜನಾಂಗದಲ್ಲಿ ವ್ಯಾಸಂಗ ಮಾಡಿರುವರನ್ನು ಮಾದರಿಯಾಗಿಟ್ಟುಕೊಂಡು ಮುಂದಿನ ಜೀವನವನ್ನು ರೂಪಿಸಿಕೊಳ್ಳಿ ಎಂದರು.
ಈ ಹಿಂದೆ 2008ರಲ್ಲಿ ಉಪ್ಪಾರ ಸಮಾಜದ ಸಮುದಾಯಭವನಕ್ಕೆ 25 ಲಕ್ಷ ಹಣ ಅನುದಾನ ನೀಡಿದ್ದೆ. ಮುಂದಿನ ದಿನ ಯಾರು ಶಾಸಕರು ಅನುದಾನ ನೀಡಿಲ್ಲ. ಎಲ್ಲಾ ಜನಾಂಗದವರು ಜಾಗೃತರಾಗಲು ಶಿಕ್ಷಣ ಅನಿವಾರ್ಯ. ಆದ ಕಾರಣ ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಿ ಎಲ್ಲಾ ರಂಗದಲ್ಲೂ ಸಬಲರಾಗಬೇಕು. ಸಮುದಾಯ ಬೆಳೆಯಲು ಸಂಘಟನೆ ಅನಿವಾರ್ಯ ಆದ ಕಾರಣ ಎಲ್ಲರೂ ಸಂಘಟಿರಾಗಿರಿ. ನಿಮ್ಮನ್ನು ಆಡಳಿತ ಮಾಡುವ ಸರ್ಕಾರವನ್ನು ಪ್ರಶ್ನೆ ಮಾಡುವ ಅಧಿಕಾರ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಉಪ್ಪಾರ ಸಮಾಜ ಶಿಕ್ಷಣದಲ್ಲಿ ಮುಂದುವರೆದು ರಾಜಕೀಯದಲ್ಲೂ ನಿಮ್ಮ ಛಾಪು ಮೂಡಿಸಿದರೆ ಸಮಾಜವು ಉನ್ನತ ಶ್ರೇಣಿಯಲ್ಲಿ ಸಾಗುತ್ತದೆ ಎಂದರು
ಜಿಪಂ ಸದಸ್ಯ ಎಂ.ಯೋಗೇಶ್ ಮಾತನಾಡಿ, ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಯುವಜನತೆ ಆಸಕ್ತಿವಹಿಸುತ್ತಿಲ್ಲ. ಆಸಕ್ತಿ ಇದ್ದರೂ ಕಲಿಕೆಗೆ ಪೋಷಕರ ಅಗತ್ಯ ನೆರವು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜನಾಂಗದ ಹಿರಿಯರು ಸಮಾಜದ ಮುಖಂಡರಜೋತೆ ಗೂಡಿ ಮಕ್ಕಳ ಕಲಿಕೆಗೆ ವೇಧಿಕೆಯನ್ನು ಸೃಷ್ಠಿಮಾಡಿದರೆ ಉತ್ತಮ ಬೆಳವಣಿಗೆಯನ್ನು ಸಮಾಜದಲ್ಲಿ ಕಾಣಬಹುದು ಎಂದರು.
ತಾ.ಪಂ. ಸದಸ್ಯ ಶ್ರೀಕಾಂತ್,ಜಯ್ಯಪ್ಪ, ಎ.ಎಸ್. ಬಸವರಾಜ್, ಜಿ.ಪಂ. ಸದಸ್ಯ, ಲೋಕೇಶಪ್ಪ, ಸಿ.ಹೆಚ್. ಶ್ರೀನಿವಾಸ್, ಭೀಮಪ್ಪ, ಚಂದ್ರಪ್ಪ, ವಿಜಯ್ ಕುಮಾರ್, ಲತಾಕೃಷ್ಣಮೂರ್ತಿ, ದಾಸಪ್ಪ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
