ಬೆಂಗಳೂರು
ಪ್ರತಿದಿನದಂತೆ ಅಲ್ಲಿ ನೂರಾರು ಜನರು ಊಟಕ್ಕಾಗಿ ಕಾಯುತ್ತಿದ್ದರು. ಒಂದಿಷ್ಟು ಜನ ಏನೋ ಗೊಣಗಾಡುತ್ತಾ ಹೋದರೆ ಮತ್ತಷ್ಟು ಮಂದಿ ಸಪ್ಪೆ ಮುಖ ಮಾಡಿ ಹಿಂದಿರುಗುತ್ತಿದ್ದರು. ಇನ್ನು ಕೆಲವರು ಊಟಕ್ಕಾಗಿ ಎಲ್ಲಿಗಪ್ಪಾ ಹೋಗುವುದು ಎಂದು ಪಿಸುಗುಡುತ್ತಿದ್ದರು.
ಹೌದು, ಇದು ಶನಿವಾರ ಮಧ್ಯಾಹ್ನ ವಿಧಾನಸೌಧದ ಕ್ಯಾಂಟೀನ್ ಮುಂಭಾಗ ಕಂಡು ಬಂದ ದೃಶ್ಯ. ಹೀಗೆ ಇವರೆಲ್ಲ ಪರದಾಡುತ್ತಿದ್ದದ್ದು ವಿಧಾನಸೌಧ ಕ್ಯಾಂಟಿನ್ ಸ್ಥಗಿತಗೊಂಡಿದ್ದಕ್ಕೆ.
ಒಂದು ವರ್ಷದ ಹಿಂದಷ್ಟೆ ನವೀಕರಣಗೊಂಡಿದ್ದ ಕ್ಯಾಂಟಿನ್ ಬಂದ್ ಆಗಿದೆ. ಎಂದಿನಂತೆ ಅಲ್ಲಿ ಊಟ ತಿಂಡಿ, ಕಾಫಿ ಸಿಗದೇ ಜನರು, ವಿಧಾನಸೌಧದ ಸಿಬ್ಬಂದಿ ಅಲೆದಾಡುವಂತಾಯಿತು.
ಸುಮಾರು 15 ವರ್ಷಗಳಿಂದ ವಿಧಾನಸೌಧಕ್ಕೆ ಬರುವವರಿಗೆ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಊಟ ಉಪಹಾರ ನೀಡಲು ಕ್ಯಾಂಟೀನ್ ನಿರ್ಮಿಸಲಾಗಿತ್ತು. ಆದರೆ ಕ್ಯಾಂಟಿನ್ ನಲ್ಲಿ ಗುಣಮಟ್ಟ ಆಹಾರ ಸ್ವಚ್ಛತೆಯಿಲ್ಲ ಎನ್ನುವ ಕಾರಣಕ್ಕೆ ಹಳೆಯ ಕ್ಯಾಂಟಿನನ್ನು ಹೊಸ ಕ್ಯಾಂಟಿನಿಗೆ ವರ್ಗಾಯಿಸಲಾಗಿತ್ತು.ಕಾಗೋಡು ತಿಮ್ಮಪ್ಪ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕ್ಯಾಂಟಿನ್ ನವೀಕರಣಗೊಳಿಸಲಾಗಿತ್ತು.
ಇಂದಿರಾ ಕ್ಯಾಂಟಿನ್ಗಳಿಗೆ ಆಹಾರ ಪೂರೈಕೆ ಮಾಡುವ ಸಂಸ್ಥೆಗೆ ಕ್ಯಾಂಟಿನ್ ನಡೆಸಲು 1 ವರ್ಷಕ್ಕೆ ಪ್ರತಿ ತಿಂಗಳು 1.25 ಲಕ್ಷ ರೂ.ಗಳಿಗೆ ಟೆಂಡರ್ ನೀಡಲಾಗಿತ್ತು. ಆರಂಭದಲ್ಲಿದ್ದ ಆಹಾರದ ಗುಣಮಟ್ಟ, ಪ್ರಮಾಣ ಬರುಬರುತ್ತಾ ಕ್ಷಿಣಿಸಿತ್ತು. ಕೆಲ ದಿನಗಳ ಹಿಂದೆ ಕ್ಯಾಂಟಿನ್ ಮುಂಭಾಗ ಅಂಟಿಸಿದ್ದ ಸ್ಟಿಕ್ಕರನ್ನು ಸಹ ಕಿತ್ತೆಸೆಯಲಾಗಿತ್ತು. ಇತ್ತೀಚೆಗೆ ಸರಿಯಾಗಿ ಆಹಾರವನ್ನು ಸಹ ಸಿದ್ಧಪಡಿಸುತ್ತಿರಲಿಲ್ಲ. ಶನಿವಾರ ಇದ್ದಕ್ಕಿದ್ದಂತೆ ಕ್ಯಾಂಟಿನ್ ಬಂದ್ ಮಾಡಲಾಗಿದೆ. ಹೊಸ ಕ್ಯಾಂಟೀನ್ ನವೀಕರಣಗೊಂಡ 5 ತಿಂಗಳಿನಲ್ಲಿಯೇ ಮುಚ್ಚಿದೆ.
ಕ್ಯಾಂಟಿನ್ ಸ್ಥಗಿತಗೊಳಿಸಿದ ಬಗ್ಗೆ ಯುಎನ್ಐ ಕನ್ನಡ ಸುದ್ದಿಸಂಸ್ಥೆ ಜೊತೆಗೆ ವ್ಯವಸ್ಥಾಪಕ ಉಮಾಶಂಕರ್ ಮಾತನಾಡಿ, ಕ್ಯಾಂಟಿನ್ ಪ್ರಾರಂಭಿಸಿದ ದಿನಗಳಿಂದಲೂ ನಷ್ಟವೇ ಆಗುತ್ತಿತ್ತು. ತಿಂಗಳಿಗೆ 2.5 ಲಕ್ಷಕ್ಕಿಂತಲೂ ಹೆಚ್ಚು ಹಣ ಸಂಗ್ರಹವಾಗಬೇಕು. ಆರಂಭದಲ್ಲಿಯೇ ಕ್ಯಾಂಟಿನ್ ಬಂದ್ ಮಾಡಿದರೆ ಸಂಸ್ಥೆ ಕಪ್ಪು ಪಟ್ಟಿಗೆ ಸೇರಬಹುದೆಂಬ ಭಯವಿತ್ತು. ಹೀಗಾಗಿ ಹೇಗೋ 5 ತಿಂಗಳು ನಡೆಸಿ, ಈಗ ಬಂದ್ ಮಾಡಿದ್ದೇವೆ. ವಿಧಾನಸೌಧ ಕ್ಯಾಂಟಿನ್ ನಿಂದ ಯಾವುದೇ ಲಾಭವಾಗಿಲ್ಲ. 5 ತಿಂಗಳು ಕ್ಯಾಂಟಿನ್ ನಡೆಸಿದ್ದು ಉಚಿತ ಸೇವೆಯಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಸೋಮವಾರದಿಂದ ನಿಸರ್ಗ ಕಂಪೆನಿಯೇ ಟೆಂಡರ್ ಮುಂದುವರೆಸಿಕೊಂಡು ಹೋಗುವಂತೆ ಡಿಪಿಆರ್ ನಿರ್ದೇಶಿಸಿದೆ ಎನ್ನಲಾಗಿದೆ.
ಕುಖ್ಯಾತ ಪಾತಕಿ ರವಿಪೂಜಾರಿಯನ್ನು ಬಂಧಿಸುವ ಸರ್ಕಾರ ಯಶಸ್ವಿಯಾಗಿದೆ ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಕುಮಾರಸ್ವಾಮಿ ನೀಡಿರುವ ಹೇಳಿಕೆ, ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅವನನ್ನು ಅಮೆರಿಕಾ ಹತ್ಯೆಗೈದಿದ್ದರೂ ಸಹ ಅದರ ಶ್ರೇಯಸು ದೇವೇಗೌಡರಿಗೆ ಸಲ್ಲಬೇಕು ಎಂದು ಹೇಳಿದಂತಿದೆ. ಕುಮಾರಸ್ವಾಮಿ ಮೊದಲು ಎದ್ದುನಿಂತು, ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ಎದೆಗಾರಿಕೆ ತೋರಬೇಕು. ಸರ್ಕಾರದಲ್ಲಿ ಆಡಳಿತ ನಡೆಸುವುದು ಎಂದರೆ ಅದು ಸಿನಿಮಾ ನಿರ್ಮಾಣ ಮಾಡಿದಂತೆ ಅಲ್ಲ ಎಂದು ವ್ಯಂಗ್ಯವಾಗಿ ಬಿಜೆಪಿ ಟ್ಟಿಟ್ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
