ಕೊಟ್ಟೂರು:
ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನದಿಂದ ಗ್ರಾಮ ಪಂಚಾಯ್ತಿ ವತಿಯಿಂದ ಕಡಿಯುವ ನೀರು ಸರಬರಾಜು ಮಾಡದೆ ಇರುವುದರಿಂದ ಬೇಸತ್ತ ಗ್ರಾಮಸ್ಥರು ಪಕ್ಕದ ಹೊಲದ ಬೋರ್ವೆಲ್ಗಳಿಂದ ಕಡಿಯುವ ನೀರು ತಂದು ಕಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಜನರು ತಿಳಿಸಿದ್ದಾರೆ.
ಬೇಸಿಗೆ ಇನ್ನು ಎರಡು ತಿಂಗಳು ಇರುವಾಗಲೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿರುವುದರಿಂದ ಜನರಲ್ಲಿ ಆತಂಕದ ಛಾಯೆ ಸೃಷ್ಠಿಯಾಗಿದೆ. ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಿವಾಸಿ ವಿರೂಪಕ್ಷಪ್ಪ ಹೇಳಿದರು.
ಊರಿನ ಮುಖ್ಯರಸ್ತೆಯಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿರುವುದರಿಂದ ಅದರ ಕೆಳ ಭಾಗದಲ್ಲಿ ಕಡಿಯುವ ನೀರಿನ ಪೈಪು ಲೈನ್ ಹಾದು ಹೋಗಿರುವುದರಿಂದ ಪೈಪ್ನಲ್ಲಿ ಮಣ್ಣು ಮುಚ್ಚಿರಬಹುದು ಅಥವಾ ಒಡೆದು ಹೋಗಿರಬಹುದು ಎಂದು ಗ್ರಾಮ ಪಂ. ನೀರು ಸರಬರಾಜು ಸಹಾಯಕರು ಹೇಳುತ್ತಿದ್ದಾರೆ ಎಂದು ಹಸೇನ್ಫೀರ್ ಮಾಹಿತಿ ನೀಡಿದರು.
ಇದೆ ಮೊದಲ ಭಾರಿಗೆ ನೀರಿನ ಅಭಾವ ಹೆಚ್ಚಿರುವುದರಿಂದ ನಮ್ಮ ಊರಿನಲ್ಲಿ ಕಡಿಯುವ ನೀರಿನ ಸಮಸ್ಯೆ ಜೊತೆಗೆ ಶಾಲಾ-ಕಾಲೇಜು ಗಳಿಗೆ ಹೋಗುವಮಕ್ಕಳಿಗೆ ಸ್ನಾನ ಮಾಡುವುದಕ್ಕೆ, ಬಟ್ಟೆ ತೋಳೆಯಲು ನೀರಿಲ್ಲ ಅದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮದ ನಿವಾಸಿಗಳಾದ ಬಸವರಾಜ, ವೀರೇಶ, ಮಂಜುನಾಥ,ಗುರು ಸಂಗಪ್ಪ, ಮತ್ತು ಮಹಿಳೆಯರು, ಮುಂತಾದವರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
