ತುಮಕೂರು ಜಿಲ್ಲಾಧಿಕಾರಿ ತಿನ್ನುತ್ತಿದ ಬಿಸ್ಕೆಟ್ ನಲ್ಲಿ ಮೊಳೆ, ಬೇಕರಿ ಸೀಜ್!!!

        ನ. 30ರಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ನಡೆಯಲಿರುವ ಯುವಜನೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದವರಿಗೆ ಬಿಸ್ಕೆಟ್​​​, ಕೇಕ್, ಚಿಪ್ಸ್ ಕೊಡಲಾಗಿತ್ತು.

          ಸಭೆಯ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬಿಸ್ಕೆಟ್​​​ ತಿನ್ನಲು ಮುಂದಾದಾಗ ಅದರಲ್ಲಿ ಮೊಳೆ ಕಂಡುಬಂದಿದೆ. ಸ್ಕ್ರೂ ಆಕಾರದ ಕಬ್ಬಿಣದ ತುಂಡು ಕಂಡ ಜಿಲ್ಲಾಧಿಕಾರಿ ಗಾಬರಿಯಾದ ಅವರು, ಇದನ್ನು ಗಂಭೀರವಾಗಿ ಪರಿಗಣಿಸಿ ಬಿಸ್ಕೆಟ್ ತಂದ ಬೇಕರಿಯ ಬಗ್ಗೆ ಸಿಬ್ಬಂದಿ ಬಳಿ ವಿಚಾರಿಸಿದಾಗ, ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿಯ ಮಯೂರ ಬೇಕರಿಯಲ್ಲಿ ತಂದಿರುವುದಾಗಿ  ತಿಳಿಸಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿಯವರು ಬೇಕರಿಯನ್ನು ಮುಚ್ಚುವಂತೆ ಆದೇಶ ಹೊರಡಿಸಿ, ಬೇಕರಿಗೆ ಬೀಗ ಹಾಕಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ