ದಾವಣಗೆರೆ:
ಲಯನ್ಸ್ ಕ್ಲಬ್ ಅಡಿಯಲ್ಲಿ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತಂದಿರುವ ನ್ಯೂ ಲಿಯೋ ಕ್ಲಬ್ ಆಫ್ ಜೆಜೆಎಂಎಂಸಿ ದಾವಣಗೆರೆಯ ಉದ್ಘಾಟನಾ ಕಾರ್ಯಕ್ರಮ ನ.14ರಂದು ನಗರದಲ್ಲಿ ನಡೆಯಲಿದೆ ಎಂದು ಕ್ಲಬ್ನ ಸಂಯೋಜಕ ವಾಸುದೇವ್ ರಾಯ್ಕರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ದೇವರಾಜ್ ಅರಸು ಬಡಾವಣೆಯ ಎ ಬ್ಲಾಕ್ನಲ್ಲಿರುವ ಲಯನ್ಸ್ ಭವನದಲ್ಲಿ ಅಂದು ಸಂಜೆ 6.30ಕ್ಕೆ ನ್ಯೂ ಲಿಯೋ ಕ್ಲಬ್ ಆಫ್ ಜೆಜೆಎಂಎಂಸಿ ದಾವಣಗೆರೆಯನ್ನು ಲಿಯೋ ಜಿಲ್ಲಾ ಅಧ್ಯಕ್ಷೆ ಜಯಶ್ರೀ ಕೃಷ್ಣರಾಜ್ ಉದ್ಘಾಟಿಸಲಿದ್ದಾರೆ. ಕ್ಲಬ್ನ ನಿಕಟ ಪೂರ್ವ ಜಿಲ್ಲಾ ರಾಜ್ಯಪಾಲ ಕೆ.ಸುರೇಶ್ ಪ್ರಭು ಪದಗ್ರಹಣ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್, ಲಯನ್ಸ್ ಕ್ಲಬ್ನ ಜಿ.ನಾಗನೂರ್, ಡಾ.ಬಿ.ಎಸ್.ನಾಗಪ್ರಕಾಶ್, ನಿರ್ಮಲ ಶಿವಕುಮಾರ್, ಇ.ಎಂ.ಮಂಜುನಾಥ್, ಎಸ್.ಯು.ಅಕ್ಷಾ, ಎ.ಬಿ.ಪ್ರತಾಪ್ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ ಸಹ ನಡೆಸಲಾಗುವುದು. ಸಕ್ಕರೆ ಕಾಯಿಲೆ ದಿನಾಚರಣೆಯ ಪ್ರಯುಕ್ತ ಉಚಿತ ತಪಾಸಣೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ನ ಮಂಜುನಾಥ್ಸ್ವಾಮಿ, ಬಸವರಾಜ್, ನಿಯೋ ಕ್ಲಬ್ನ ನಿಯೋಜಿತ ಅಧ್ಯಕ್ಷ ಫಣಿ ಕೃಷ್ಣ, ನಿಯೋಜಿತ ಕಾರ್ಯದರ್ಶಿ ಅನುಷಾ ಬಾಲಾಜಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/11/12_dvg_02.jpg)