ಅಂತರ್ಜಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ಬಿ.ಸಿ.ನಾಗೇಶ್

ತಿಪಟೂರು :

       ಅಂತರ್ಜಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ, ಮಳೆ ನೀರು ಹರಿದು ಹೋಗದಂತೆ ತಡೆಯುವ ಪ್ರಯತ್ನವಾಗಬೇಕು, ಕೇಂದ್ರಸರ್ಕಾರ ಅಂತರ್‍ಜಲ ರಕ್ಷಣೆಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಚೆಕ್ ಡ್ಯಾಂಗಳನ್ನು ನಿರ್ಮಾಣಮಾಡಿ ಅಂತರ್‍ಜಲ ಹೆಚ್ಚಳಕ್ಕೆ ಕ್ರಮವಹಿಸುತ್ತಿದೆ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

        ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದ ನಿಂಬೆಗೊಂದಿ ಹಳ್ಳಕ್ಕೆ 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚೆಕ್‍ಡ್ಯಾಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ಇತ್ತಿಚಿನ ದಿನಗಳಲ್ಲಿ ಕೊಳವೇಬಾವಿಗಳ ಸಂಖ್ಯೆ ಜಾಸ್ತಿಯಾಗಿ ಅಂತರ್‍ಜಲಕ್ಕೆ ತೀರ್ವವಾದ ತೊಂದರೆಯಾಗಿದ್ದೆ ಮುಂದಿನ ಜನಾಂಗಕ್ಕೆ ನೀರನ್ನು ಉಳಿಸಬೇಕಾದರೆ ಅಂತರ್‍ಜಲ ಸಂರಕ್ಷಣೆ ಮಾಡಬೇಕು.

         ಮಳೆಯನೀರು ಹರಿದು ಹೋಗದಂತೆ ಭೂಮಿಯಲ್ಲೆ ಇಂಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರಸರ್ಕಾರ ಹಲವಾರು ಯೋಜನೆರೂಪಿಸಿದೆ. ಹಳ್ಳಿಗಳಿಗೆ ಅಡ್ಡಲಾಗಿ ಚೆಕ್‍ಡ್ಯಾಂ ನಿರ್ಮಿಸುತ್ತಿದೆ. ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ನಿಂಬೆಗೊಂದಿ ಹಳ್ಳಕ್ಕೆ 40 ಲಕ್ಷದ ಚೆಕ್‍ಡ್ಯಾಂ. ಕಲ್ಕೆರೆ ದೊಡ್ಡಹಳ್ಳಕ್ಕೆ 50ಲಕ್ಷ ಗೆದ್ಲೆಹಳ್ಳಿ ಹಳ್ಳಕ್ಕೆ 40 ಲಕ್ಷ ಸತ್ತೇರಾಮನಹಳ್ಳಿ ಹಳ್ಳಕ್ಕೆ 25 ಲಕ್ಷ ಸೇರಿದಂತೆ 1.08 ಕೋಟಿ ವೆಚ್ಚದ ಹಲವಾರು ಚೆಕ್ ಡ್ಯಾಂಗಳಿಗೆ ಚಾಲನೆ ನೀಡಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಫಲಾನುಭವಿಗಳ ಜಮೀನುಗಳನ್ನು ಜಮೀನಿನಲ್ಲಿ ಅಂತರ್‍ಜಲ ಹೆಚ್ಚಳಕ್ಕೆ ಅನುಕೂಲವಾಗುವಂತೆ ಚೆಕ್‍ಡ್ಯಾಂ ನಿರ್ಮಿಸುತ್ತಿದ್ದು ಕಾಮಗಾರಿಯ ಗುಣಮಟ್ಟದಿಂದ ನಿರ್ಮಿಸಿ ನಿಗದಿತ ಕಾಲುವೆಯಲ್ಲಿ ಪೂರ್ಣಗೊಳಿಸ ಬೇಕಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಎ.ಇಇ ಲಕ್ಷ್ಮೀಪತಿ, ಇಂಜಿನಿಯರ್ ಸುರೇಶ್ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link