ಹರಪನಹಳ್ಳಿ
ಮಹ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ನಿಮಿತ್ತ ಈದ್ಮಿಲಾದ್ ಹಬ್ಬವನ್ನು ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ರೋಗಿಗಳಿಗೆ ಹಾಗೂ ವಸತಿನಿಲಯದ ವಿದ್ಯಾರ್ಥಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಿದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ನೌಕರರು ಆಸ್ಪತ್ರೆಯ ಒಳರೋಗಿಗಳಿಗೆ ಬ್ರೆಡ್, ಹಾಲು ಹಾಗೂ ಹಣ್ಣುಗಳನ್ನು ವಿತರಣೆ ಮಾಡಿದರು ನಂತರ ಹಡಗಲಿ ರಸ್ತೆಯಲ್ಲಿರುವ ಚರ್ಚ್ನ ಆರೋಗ್ಯಮಾತ ಕೇಂದ್ರದ ವಸತಿನಿಲಯದ ವಿದ್ಯಾರ್ಥಿಗಳಿಗೆ ಬಿಸ್ಕೇಟ್, ಬ್ರೆಡ್ ಹಣ್ಣು ನೀಡಲಾಯಿತು. ಖಾಸಗಿ ಆಸ್ಪತ್ರೆಗಳಾದ ಮಹೇಶ್ ನರ್ಸಿಂಗ್ಹೋಮ್, ಸನ್ರೈಸ್, ಸಿಟಿಸೆಂಟರ್, ಹರ್ಷ ಆಸ್ಪತ್ರೆಗಳಿಗೆ ತೆರಳಿ ಹಾಲು, ಗ್ರೆಡ್ ವಿತರಣೆ ಮಾಡಿದರು.
ನೌಕರರ ಸಂಘದ ಅಧ್ಯಕ್ಷ ದಾದಾ ಖಲಂದರ್, ಡಾ.ಕೆ.ಎಂ.ಎನ.ಖಾನ್, ಕಸಾಪ ಅಧ್ಯಕ್ಷ ರಾಮನಮಲಿ, ಸಲಾಂಸಾಬ್, ಎಂ.ಶರೀಪ್, ಎ.ಮೂಸಾಸಾಬ್, ಸಹ್ಯದ್, ಹಮೀದ್, ಅಮಾನುಲ್ಲಾ, ಬಡಗಿ ರಹಮತುಲ್, ಎಸ್.ಮೇಹಬೂಬ್ಸಾಬ್, ಉಸ್ಮಾನ್ಸಾಬ್, ಸಲೀಂ, ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/21HRP3.jpg)