ಹೊಳಲ್ಕೆರೆ:
ರಾಷ್ಟ್ರ ಹಾಗೂ ರಾಜ್ಯಾದ ಎಲ್ಲಾ ವಕೀಲರುಗಳ ಸಂಘಗಳಿಗೆ ಕಟ್ಟಡ, ಮೂಲ ಸೌಕರ್ಯ ಮತ್ತು ಗ್ರಂಥಾಲಯಗಳನ್ನು ಪೂರೈಸಲು, ತಾಂತ್ರಿಕ ಸೌಲಭ್ಯ ಹಾಗೂ ಇನ್ನಿತರೆ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಭಾರತೀಯ ವಕೀಲ ಪರಿಷತ್ತಿನ ಅಧ್ಯಕ್ಷ ಮೆನನ್ ಕುಮಾರ್ ಮಿಶ್ರರವರ ಮಾಡಿಕೊಂಡ ಮುಖ್ಯ ಮಂತ್ರಿಯವರಿಗೆ ಮನವಿಯ ಕುರಿತು, ರಾಜ್ಯ ವಕೀಲ ಪರಿಷತ್ತಿನ ಆದೇಶದ ಮೇರೆಗೆ ತಾಲ್ಲೂಕು ವಕೀಲರ ಸಂಘ ಸಭೆ ನಡೆಸಿ ತಹಶೀಲ್ದಾರ್ ಕೆ.ನಾಗರಾಜ್ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘಧ ಅಧ್ಯಕ್ಷ ಜಿ.ಇ.ರಂಗಸ್ವಾಮಿ, ಕಾರ್ಯದರ್ಶಿ ಪ್ರದೀಪ್ ಕುಮಾರ್, ವಕೀಲರುಗಳಾದ ಶಿವಕುಮಾರ್, ಸತ್ಯ ನಾರಾಯಣ್, ಹನುಮಂತಪ್ಪ, ರಂಗನಾಥ್, ಸುರೇಶ್, ಮೂಲಿಮನೆ, ಕೀರ್ತಿವಿಜಯ್, ಚಿದಾನಂದಪ್ಪ ಉಪಸ್ಥಿತರಿದ್ದರು.