ದಾವಣಗೆರೆ:
ನಿಂಚನ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಉಮಾದೇವಿ.ಬಿ.ಕೆ. ಮಾತನಾಡಿ ಹಿರಿಯರನ್ನು ಗೌರವದಿಂದ ಕಾಣಬೇಕು ಅವರನ್ನು ನಿರ್ಲಕ್ಷವಹಿಸಿದರೆ ನಮಗೆ
ಒಳ್ಳಯದಾಗುವುದಿಲ್ಲ.ಪ್ರಸ್ತತ ದಿನಗಳಲ್ಲಿ ಮಕ್ಕಳು ದೊಡ್ಡವರಾದಂತೆ ಹಿರಿಯರನ್ನು ಮರೆತುಬಿಡುತ್ತಾರೆ.ಆರೀತಿಯಾಗದ್ದಂತೆ ನೊಡಿಕೊಳ್ಳಬೇಕೆಂದು ವಿಧ್ಯಾರ್ಥಿಗಳಿಗೆ ತಿಳಿಹೇಳಿದರು.ಪೋಷಕರುಕಷ್ಟಪಟ್ಟು ನಮ್ಮನ್ನು ಸಾಕಿ ವಿದ್ಯಾವಂತರನ್ನಾಗಿಸುತ್ತಾರೆ .
ವಿದ್ಯಾವಂತರಿಂದಲೇ ಸಾಕಷ್ಟು ಜನ ಪೋಷಕರನ್ನು ನಿರ್ಲಕ್ಷ್ಯ ಮಾಡುತ್ತಿದಾರೆ.ಇಂದು ವೃದ್ದಾಶ್ರಮಗಳು ಹೆಚ್ಚಾಗುತ್ತಿರುವುದು ವಿಷಾದನೀಯವಾದದ್ದು.ಎಂದರು,ಹೇಳಿದರು.
ಮುಖ್ಯ ಅಥಿಗಳಾಗಿ .ಶಾಲಾಭಿವೃಧಿಸಮಿತಿಯ. ಅದ್ಯಕ್ಷರಾದ ಎ.ಎಂ.ಜಯದೇವಪ್ಪ. ಜೆ.ಆರ್.ಶಿವಲಿಂಗಪ್ಪ. ಪ್ರಾಂಶುಪಾಲರಾದ ಶ್ರೀಮತಿ ಮಾಲಾ. ಮುಖ್ಯೊಪಾದ್ಯಯರಾದ ಕೆ.ಜಿ.ರೇವಣಸಿದ್ದಪ್ಪ.ಹಿರಿಯ ಶಿಕ್ಷಕರಾದ ಲೋಕೇಶ್ವರಪ್ಪ.ಬಿ.ಎಂ. ಪಂಚಾಕ್ಷರಿ.ಸಿ.ಬಿ. ಇವರುಗಳುಮಾತನಾಡಿ,ಹಿರಿಯನಾಗರಿಕರನ್ನು ಯಾವ ರೀತಿನೋಡಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.ರೂಪ ನಿರೂಪಿಸಿದರು. ಪ್ರೇಮ,ಪವಿತ್ರ ಕಾರ್ಯಕ್ರಮ ನಡೆಸಿಕೊಟ್ಟರು.ಹಾಗೂ ಶಿಕ್ಷಕವೃಂದ ಮತ್ತುಮಕ್ಕಳು.ಪೊಷಕರು.ಹಿರಿಯನಾಗರಿಕರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








