ಕುಣಿಗಲ್
ಪಟ್ಟಣದ ಜ್ಞಾನಭಾರತಿ ಕಾಲೇಜಿನಲ್ಲಿ ಭಾರತೀಯ ಸಂಸ್ಕತಿಯ ಉಡುಗೆ ತೊಡಿಗೆಗಳಾದ ಬಿಳಿ ಪಂಚೆ,ಬಿಳಿ ಅಂಗಿ ಹಾಕಿದ ವಿದ್ಯಾರ್ಥಿಗಳು. ಸೀರೆ ರವಿಕೆ ತೊಟ್ಟ ವಿದ್ಯಾರ್ಥಿನಿಯರು ತಮ್ಮ ಅಜ್ಜ ಅಜ್ಜಿ ಮುತ್ತಜ್ಜಿಯರೊಂದಿಗೆ ಕಾಲೇಜಿಗೆ ಆಗಮಿಸುವ ಮೂಲಕ ವಿನೂತನವಾಗಿ ಹೊಸ ವರ್ಷ 2019 ಸ್ವಾಗತಿಸುವ ಜೊತೆಗೆ ತಮ್ಮ ಅಜ್ಜ ಅಜ್ಜಿಯರಿಗೆ ಪಾದ ಪೂಜೆ ನೆರವೇರಿಸಿ ಅವರಿಂದ ಕೈತುತ್ತು ಸವಿದು ಅವರ ಪ್ರೀತಿ ವಾತ್ಸಲ್ಯಕ್ಕೆ ಪಾತ್ರರಾದ ಸನ್ನಿವೇಶ ನಾಗರಿಕರ ಪ್ರಶಂಸೆಗೆ ಪಾತ್ರವಾಗಿತ್ತು.
ಪಟ್ಟಣದ ವಕ್ಕಲಿಗರ ಸಂಘದ ಜ್ಞಾನಭಾರತಿ ಕಾಲೇಜಿನಲ್ಲಿ 2019ರ ಹೊಸ ವರ್ಷವನ್ನು ವಿನೂತನ ರೀತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ಸಂಸ್ಕತಿ-ಸಂಸ್ಕಾರ ಕಲಿಸುತ್ತಿರುವ ಸಂಸ್ಥೆ ಎಂದರೆ ತಾಲ್ಲೂಕಿನಲ್ಲೇ ಪ್ರಥಮ ಸ್ಥಾನದಲ್ಲಿರುವುದು ಜ್ಞಾನಭಾರತಿ ವಿದ್ಯಾಸಂಸ್ಥೆ ಎಂದವರು ಇಲ್ಲಿನ ಪ್ರಾಂಶುಪಾಲ ರಮೇಶ್ ಮತ್ತು ಉಪನ್ಯಾಸಕರನ್ನು ಕೊಂಡಾಡಿದರು.
ಇತ್ತೀಚಿನ ದಿನಗಳಲ್ಲಿ ಹಲವಾರು ವಿದ್ಯಾಸಂಸ್ಥೆಗಳು ಹುಟ್ಟಿಕೊಂಡಿದ್ದು ಕೇವಲ ಅಂಕಗಳಿಕೆಗೆ ಮಾತ್ರ ಗಮನ ನೀಡುತ್ತಾ ಸಂಸ್ಕಾರ ಸಂಸ್ಕøತಿ ಕಲಿಸುವ ಬದಲು ಅಂಕಗಳಿಕೆಗೆ ಹೆಚ್ಚು ಗಮನ ನೀಡಿ ಇಂಜಿನಿಯರ್ ಡಾಕ್ಟರ್ಗಳನ್ನಾಗಿ ಮಾಡಿ ಹಣ ದುಡಿಯುವ ಯಂತ್ರಗಳನ್ನಾಗಿ ಮಾಡುತ್ತಿದ್ದಾರೆ ಆದರೆ ಸಂಸ್ಕಾರವಿಲ್ಲದೆ ಹಣ ಸಂಪಾದನೆ ಮಾಡಿದವರಿಂದ ತಂದೆ ತಾಯಿ ಅಜ್ಜ ಅಜ್ಜಿಯರಿಗೆ ಪ್ರೀತಿ ವಾತ್ಸಲ್ಯ ತೋರಿಸದೆ ಮನೆಯಿಂದ ಆಚೆ ಹಾಕುತಿರುವುದರಿಂದ ಇಂದು ವೃದ್ದಾಶ್ರಮಗಳು ಹೆಚ್ಚಾಗಲು ಕಾರಣಕರ್ತರಾಗಿದ್ದಾರೆ, ವಿದ್ಯಾರ್ಥಿಗಳು ಸ್ವಚ್ಚವಾಗಿದ್ದರೆ ಸಾಲದು ಮನಸ್ಸು ಕೂಡ ಸ್ವಚ್ಚವಾಗಿರಬೇಕುಹಿರಿ ಜೀವಗಳು ನಿಮ್ಮ ಹಣ ಕೇಳುವುದಿಲ್ಲ ಬದಲಿಗೆ ನಿಮ್ಮ ಪ್ರೀತಿ ಕೇಳುತ್ತಾರೆ ಅದನ್ನು ಕಲಿಸುವುದು ಕೂಡ ಶಿಕ್ಷಣದ ಜವಾಬ್ದಾರಿ ಅದನ್ನು ಅರಿತಿರುವ ಜ್ಞಾನಭಾರತಿ ಕಾಲೇಜು ಇಂದಿನ ಎಲ್ಲಾ ವಿದ್ಯಾಸಂಸ್ಥಗಳಿಗಿಂತ ಮುಂದಿದೆ ಎಂದರು
ದಿವ್ಯಸಾನಿಧ್ಯ ವಹಿಸಿದ್ದ ಅರೇಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಇಂದು ಟಿವಿಯಲ್ಲಿನ ದಾರವಾಹಿಗಳಿಗೆ ಮಾರು ಹೋಗಿರುವ ಹೆಂಗಸರು ಮಕ್ಕಳ ಜೊತೆ ಸಮಯ ಕಳೆಯುವುದು ಕಡಿಮೆಯಾಗಿದೆ ಹಿಂದೆ ಇದ್ದಂತ ಅವಿಭಕ್ತ ಕುಟುಂಬ ಪದ್ದತಿ ಯಾರಿಗೂ ಬೇಡವಾಗಿದೆ ಅಂದು ಪರಸ್ಪರ ಹೊಂದಾಣಿಕೆಯಿಂದ ಎಲ್ಲರ ಕಷ್ಟ ಸುಖಗಳು ಚರ್ಚಿಸುತ್ತಾ ಎಲ್ಲದರಲ್ಲೂ ಬಾಗಿಯಾಗುತಿದ್ದರು ಆದರೆ ಇಂದು ಮಕ್ಕಳಿಗೆ ಅತಿಯಾದ ಪ್ರೀತಿ ತೋರಿಸಲು ಹಣ ಐಶ್ವರ್ಯ ಮಕ್ಕಳಿಗೆ ನೀಡಿ ಮಕ್ಕಳನ್ನು ಸೋಮಾರಿ ಮತ್ತು ಸಮಾಜದಲ್ಲಿ ಕೆಟ್ಟವರನ್ನಾಗಿ ಮಾಡುತಿದ್ದಾರೆ ಎಂದರು
ವಿನೂತನ ಸಮಾರಂಬದಲ್ಲಿ ಅಜ್ಜಿಯರು ಸೋಬಾನೆ ಹಾಡಿದರೆ ಅಜ್ಜಂದಿರು ರಂಗಗೀತೆಗಳನ್ನು ಹಾಡಿದರು ಉತ್ತಮ ಸ್ಪರ್ಧಿಗಳಿಗೆ ಬಹುಮಾನ ಕೂಡ ನೀಡಲಾಯಿತು. ಭಾಗವಹಿಸಿದ್ದ ತಾತ ಅಜ್ಜಿಯರಿಗೆ ಮೊಮ್ಮಕ್ಕಳಿಂದಲೇ ಪಾದ ಪೂಜೆ ಮಾಡಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕಾರ್ಯದರ್ಶಿಅನಂತರಾಮಯ್ಯ, ನಿದೇರ್ಶಕರಾದ ಗಂಗಶಾನಯ್ಯ, ಪುಟ್ಟಸ್ವಾಮಯ್ಯ, ಬಿ.ಎಂ.ಹುಚ್ಚೇಗೌಡ, ರಾಜಣ್ಣ ಕಲಾವಿದರ ಸಂಘದ ಅಧ್ಯಕ್ಷ ಸಿದ್ದರಾಮೇಗೌಡ, ನರಸಿಂಹಯ್ಯ ಪ್ರಾಂಶುಪಾಲರಾದ ಕಪನಿಪಾಳ್ಯ ಡಾ.ರಮೇಶ ಹಾಗೂ ಗೋವಿಂದೇಗೌಡ, ಉಪನ್ಯಾಸಕರು ಸಿಬ್ಬಂದಿ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
