ಹಾಲಿನ ಪ್ಯಾಕೆಟ್ಗಳ ಮೂಲಕ ಮತದಾನದ ಮಹತ್ವ ಸಾರುತ್ತಿರುವ ಕೆಎಂಎಫ್..!!

ಮೈಸೂರು

         ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಲೋಕಸಭಾ ಚುನಾವಣೆಯ ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಕೈಜೋಡಿಸಿದೆ.

       ಮೈಸೂರು ಹಾಲು ಒಕ್ಕೂಟ ನಗರದಲ್ಲಿ ಮಾರಾಟ ಮಾಡುವ ಹಾಲಿನ ಪ್ಯಾಕೆಟ್ಗಳಲ್ಲಿ ಈ ಬಗ್ಗೆ ಬರಹಗಳನ್ನು ಪ್ರಕಟಿಸಿ ಜನರಿಗೆ ಮುಂದಿನ ತಿಂಗಳ 18ರಂದು ನಡೆಯುವ ಮೈಸೂರು ಲೋಕಸಭಾ ಕ್ಷೇತ್ರದ ಮತದಾನ ಬಗ್ಗೆ ಅರಿವು ಮೂಡಿಸುತ್ತಿದೆ.
ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಕೆಎಂಎಫ್ ಈ ಉಪಕ್ರಮ ಕೈಗೊಂಡಿದೆ ಎಂದು ಬೆಂಗಳೂರು ಕೆಎಂಎಫ್ ಉಪ ನಿರ್ದೇಶಕಿ ಸುಮಾ ತಿಳಿಸಿದ್ದಾರೆ.

       ರಾಜ್ಯದಲ್ಲಿ ಎಲ್ಲಾ ಹಾಲು ಉತ್ಪಾದಕ ಸಂಘಗಳು ಒಟ್ಟು 34 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತವೆ. ಪ್ರತಿ ದಿನ ಮೈಸೂರು ಸಂಘವೊಂದರಲ್ಲೇ 7.5 ಲಕ್ಷ ಹಾಲಿನ ಪ್ಯಾಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರ ಮೂಲಕ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ.

      ಜನರ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಬಗ್ಗೆ ಅರಿವು ಮೂಡಿಸಲು ಚುನಾವಣೆ ಸಂಬಂಧಿತ ಸಂದೇಶಗಳನ್ನು ಪ್ರತಿದಿನವೂ ಹಾಲಿನ ಪ್ಯಾಕೆಟ್ಗಳಲ್ಲಿ ಮುದ್ರಿಸಲಾಗುತ್ತಿದೆ. ಮೈಸೂರು ಲೋಕಸಭಾ ಕ್ಷೇತ್ರದ ಸ್ವೀಪ್ ಕಾರ್ಯಕ್ರಮ ನಿರ್ವಹಿಸುವ ಅಧಿಕಾರಿಗಳು ನೀಡಿದ ಸಂದೇಶಗಳನ್ನು ಚುನಾವಣೆ ಮುಗಿಯುವ ತನಕ ಹಾಲಿನ ಪ್ಯಾಕೆಟ್ಗಳಲ್ಲಿ ಮುದ್ರಿಸಿ ವಿತರಿಸಲಾಗುತ್ತದೆ. ಪ್ರತಿ ದಿನವೂ ವಿಭಿನ್ನ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ.

       ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ವೇಳೆ ಮೊದಲ ಬಾರಿಗೆ ಹಾಲಿನ ಪ್ಯಾಕೆಟ್ಗಳನ್ನು ಮತದಾನದ ಮಹತ್ವ ಸಾರಲು ಉಪಯೋಗಿಸಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕೆಲವೆಡೆ ಸಂದೇಶಗಳನ್ನು ಮುದ್ರಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿಯೂ ಮುದ್ರಿಸಲು ನಿರ್ಧರಿಸಲಾಗಿದೆ.
ಮೈಸೂರು ಡೈರಿಯಲ್ಲಿ 3 ಲಕ್ಷ ಲೀಟರ್ಗೂ ಅಧಿಕ ಹಾಲನ್ನು ಸಂಗ್ರಹಿಸಲಾಗುತ್ತಿದೆ.

      ಜಿಲ್ಲೆಯಾದ್ಯಂತ 7.5 ಲಕ್ಷ ಪ್ಯಾಕೆಟ್ಗಳ ಮೂಲಕ ಹಾಲನ್ನು ಪೂರೈಸಲಾಗುತ್ತಿದೆ. ಮತದಾರರನ್ನು ಮತಗಟ್ಟೆಗೆ ಕರೆತರುವ ಉದ್ದೇಶದಿಂದ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮೈಸೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ.ಎಸ್. ವಿಜಯ ಕುಮಾರ್ ತಿಳಿಸಿದರು.

      ಈ ಮುದ್ರಣಕ್ಕೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ. ಇತರ ಕೇಂದ್ರಗಳಲ್ಲೂ ಇದೇ ರೀತಿಯ ಸಂದೇಶ ಮುದ್ರಿಸಿ ವಿತರಿಸಲಾಗುತ್ತಿದೆ. ಇತ್ತೀಚಿನ ಚುನಾವಣೆಗಳಲ್ಲಿ ಮೈಸೂರಿನಲ್ಲಿ ಮತದಾನ ಪ್ರಮಾಣ ಶೇಕಡಾ 70 ದಾಟಿಲ್ಲ. ಆದ್ದರಿಂದ ಜಾಗೃತಿ ಮೂಡಿಸಲು ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

       ಕಳೆದ ಚುನಾವಣೆಗಳಲ್ಲಿ ಕಡ್ಡಾಯ ಮತದಾನದ ಮಹತ್ವ ಸಾರುವ ಸಂದೇಶಗಳನ್ನು ಹಾಲಿನ ಎಲ್ಲಾ ಮಾದರಿಗಳ ಪ್ಯಾಕೆಟ್ಗಳಲ್ಲಿ ಮುದ್ರಿಸಲಾಗಿತ್ತು. ಈ ಸಂದೇಶ ಹೆಚ್ಚಿನ ಮತದಾರರಿಗೆ ತಲುಪಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link