ಉಪಮುಖ್ಯಮಂತ್ರಿಗಳ ತವರಲ್ಲೇ ನೀರಿಗಾಗಿ ಹಾಹಾಕಾರ

ಕೊರಟಗೆರೆ ;-

     ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆದೇಶದ ಮೇರೆಗೆಜಿಲ್ಲಾ ನಗರಾಭಿವೃದ್ದಿಕೋಶಾದಿಕಾರಿ ಅನುಪಮ ರವರು ಸೂಚನೆ ಮೇರೆಗೆ ಪ.ಪಂ ವತಿಯಿಂದ ಪಟ್ಟಣದ 4ನೇ ವಾರ್ಡ್‍ಗೆಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆಎಂದು ಪ.ಪಂ. ಸದಸ್ಯ ಎನ್.ಕೆ.ನರಸಿಂಹಪ್ಪ ತಿಳಿಸಿದರು.

       ಅವರು ಪತ್ರಿಕಾ ಹೇಳಿಕೆ ನೀಡಿಇತ್ತೀಚೆಗೆ ಬರಗಾಲದ ಹಿನ್ನೆಲೆಯಲ್ಲಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮರ್ಪಕವಾಗಿ ನೀರುಒದಗಿಸುವಂತೆಜಿ.ಪಂ. ಸಭಾಂಗಣದಲ್ಲಿ ನಡೆದ ಬರ ನಿರ್ವಹಣಾ ಸಭೆಯಲ್ಲಿಜಿಲ್ಲಾ ನಗರಾಭಿವೃದ್ದಿಕೋಶಾದಿಕಾರಿ ಅನುಪಮ ಮತ್ತು ಪ.ಪಂ ಮುಖ್ಯಾದಿಕಾರಿರುಕ್ಮಣಿ ಹಾಗೂ ಕಿರಿಯಇಂಜಿನಿಯರ್‍ತ್ಯಾಗರಾಜುರವರಿಗೆ ಆದೇಶಿದ ಮೇರೆಗೆಕೊರಟಗೆರೆ

       ಪ.ಪಂ.ಗೆ ಬೇಟಿ ನೀಡಿದ ಪಿ.ಡಿ. ಅನುಪಮ ಸೂಚನೆ ಮೇರೆಗೆಯಾವುದೇ ಮೂಲ ನೀರಿನ ಸೌಕರ್ಯವಿಲ್ಲದ ಮತ್ತು ಪರಿಶಿಷ್ಠ ಜಾತಿ ಮತ್ತ ಪಂಗಡ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿರುವ ಪಟ್ಟಣದಅತಿದೊಡ್ಡ ವಾರ್ಡ್‍ಆದ 4ನೇ ವಾರ್ಡ್‍ಗೆಟ್ಯಾಂಕರ್ ಮುಖಾಂತರ ನೀರನ್ನು ಸರಬರಾಜ ಮಾಡುತ್ತಿದ್ದುಇದನ್ನು ಹೀಗೆ ಮುಂದು ವರೆಸಿಕೊಂಡು ಹೋಗುವುದಾಗಿ ಪ.ಪಂ.ಅದಿಕಾರಿಗಳು ಭರವಸೆ ನೀಡಿದ್ದಾರೆ. ಇದಕ್ಕಾಗಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ರವರಿಗೆ ಮತ್ತುಯೋಜನಾ ನಿರ್ದೇಶಕಿಅನುಪಮಾ ಹಾಗೂ ಪ.ಪಂ ಅದಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap