ಸೀತಾರಾಮ ಕಲ್ಯಾಣ ಚಿತ್ರಕ್ಕೆ ಉಚಿತ ಟಿಕೆಟ್ ವಿತರಣೆ

ಚಿಕ್ಕನಾಯಕನಹಳ್ಳಿ

        ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರ ಮಗ ನಿಖಿಲ್‍ಕುಮಾರ್ ನಾಯಕರಾಗಿ ನಟಿಸಿರುವ ಸೀತಾರಾಮಕಲ್ಯಾಣ ಚಿತ್ರದ ಬಿಡುಗಡೆಗೆ ಸಂಭ್ರಮಿಸಿ ಅವರ ಅಭಿಮಾನಿಗಳು ಪಟ್ಟಣದಲ್ಲಿ ಶುಭ ಕೋರಿ ಸಿಹಿ ಹಚಿಚಿದರು. ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬುರವರ ಅಭಿಮಾನಿ ಬಳಗದವರು ಒಂದು ದಿನದ ಸಿನಿಮಾ ಟಿಕೆಟ್‍ನ್ನು ಉಚಿತವಾಗಿ ಪ್ರೇಕ್ಷಕರಿಗೆ ವಿತರಿಸಿದರು.

        ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ಸೀತಾರಾಮಕಲ್ಯಾಣ ಚಲನಚಿತ್ರ ಪ್ರದರ್ಶನವಾಗುತ್ತಿದ್ದು, ಮುಂಜಾನೆಯ ಪ್ರದರ್ಶನದ ವೇಳೆ ಅವರ ಅಭಿಮಾನಿಗಳು ನಿಖಿಲ್‍ಕುಮಾರ್‍ರವರ ಪರ ಜೈಕಾರ ಕೂಗುತ್ತಾ ಚಿತ್ರವನ್ನು ವೀಕ್ಷಿಸಿದರು. ಚಿತ್ರಮಂದಿರಕ್ಕೆ ಆಗಮಿಸಿದ್ದ ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡಿ ಚಿತ್ರ ಶತದಿನೋತ್ಸವ ಆಚರಿಸಲೆಂದು ಹಾರೈಸಿದರು.

        ಅದ್ದೂರಿ ತಾರಾಬಳಗದ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಊಟಿ, ಬಳ್ಳಾರಿ ಮುಂತಾದ ಕಡೆ 130 ದಿನಗಳ ಚಿತ್ರೀಕರಣ ನಡೆದಿದೆ. ಎ.ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಸುನಿಲ್‍ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಅನೂಪ್‍ರುಬೆನ್ಸ್ ಸಂಗೀತ ನೀಡಿದ್ದಾರೆ. ಸೀತಾರಾಮಕಲ್ಯಾಣ ಚಿತ್ರದಲ್ಲಿ ನಾಯಕಿ ರಚಿತಾರಾಮ್, ಶರತ್‍ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾಲೋಕೇಶ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

       ಜಿಲ್ಲಾ ಪಂಚಾಯತ್ ಸದಸ್ಯರಾದ ರಾಮಚಂದ್ರಯ್ಯ, ಪುರಸಭಾ ಸದಸ್ಯೆ ಲಕ್ಷ್ಮೀಪಾಂಡುರಂಗಯ್ಯ, ಮಲ್ಲಿಕಾರ್ಜುನ್, ಮಾಜಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಜೆಡಿಎಸ್ ವಕ್ತಾರ ಸಿ.ಎಸ್.ನಟರಾಜು, ಮಾಜಿ ಪುರಸಭಾ ಸದಸ್ಯ ಕೆ.ಜಿ.ಕೃಷ್ಣೆಗೌಡ, ದೇವಾಂಗ ಸಂಘದ ನಿರ್ದೇಶಕ ಪಾಂಡುರಂಗ ಚಿತ್ರ ಶತದಿನೋತ್ಸವ ಆಚರಿಸಲೆಂದು ಶುಭ ಹಾರೈಸಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap