ಎ.ಪಿ.ಎಂ.ಸಿ ಯಾರ್ಡ್‍ನಲ್ಲಿ ದಿನಸಿಗಾಗಿ ಪ್ರತಿನಿತ್ಯ ಸರತಿ ಸಾಲು

ತಿಪಟೂರು
      ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರಿನ ಎಪಿಎಂಸಿಯಲ್ಲಿ ದಿನನಿತ್ಯ ಮಹಿಳೆಯರು ಮತ್ತು ಮಕ್ಕಳು ಉಚಿತವಾಗಿ ದಿನಸಿ ಸಿಗಬಹುದೇನೋ ಎಂದು ಬೆಳಗಿನ ಜಾವವೆ ಆಗಮಿಸಿ ಕಾಯ್ದು ನಿರಾಸೆಯಿಂದ ಬರಿಕೈನಲ್ಲಿ ಮನೆಗೆ ಮರಳುತ್ತಿರುವುದು ನೋಡಿದವರಲ್ಲಿ  ಮರುಕ ಹುಟ್ಟಿಸುತ್ತಿದೆ.
     ಲಾಕ್‍ಡೌನ್ ಆದಾಗಿನಿಂದ ದಿನನಿತ್ಯ ದುಡಿದುತಿನ್ನುವ ಜನರ ಜೊತೆಗೆ ಅಲ್ಪಸ್ವಲ್ಲ ಕೂಡಿಟ್ಟಿದ್ದ ಮದ್ಯಮವರ್ಗದವರು ಸಹ ಲಾಕ್‍ಡೌನ್ ಮುಗಿಯುವ ಮುನ್ನವೇ ಕೈಚೆಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರಂತೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಅಮಾಲರು ಸೇರಿದ್ದಾರೆ. 
     ಕಳೆದ ಶನಿವಾರ ಎ.ಪಿ.ಎಂ.ಸಿ ಆವರಣದಲ್ಲಿರುವ ಕೌಟು ವ್ಯಾಪಾರಿಗಳು ಸೇರಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಅಮಾಲರ ಕುಟುಂಬದವರಿಗೆ ದಿನಸಿ ವಿತರಣೆಯನ್ನು ವಿವಿದ ಸಂಘಗಳ ಜೊತೆಸೇರಿಮಾಡಿದ್ದರು. ಆದರೆ ಅಂದು ಸುದ್ದಿ ತಿಳಿಯದೇ ಬಂದವರಿಗೆ 5-6 ಪ್ಯಾಕ್‍ಗಳನ್ನು ಕೊಟ್ಟಿದ್ದು ಸಿಗದವರಿಗೆ ನಾಳೆ ಕೊಡುತ್ತೇನೆಂದು ಹೇಳಿದ್ದರು ಎಂದು ಹೇಳಿ ಸೋಮವಾರ, ಮಂಗಳವಾರ ಮತ್ತು ಇಂದು ಸುಮಾರು 100-150ಜನರು ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಂತಿದ್ದರು.
    ಇಂದು ಅಲ್ಲಿದ್ದವರನ್ನು ವಿಚಾರಸಿದಾಗ ತಮ್ಮ ಹತ್ತಿರ ವಿದ್ದ ಗುತುರಿನ ಚೀಟಿಯನ್ನು ತೋರಿಸಿ ನಾವು ಅಮಾಲರು ನನಮಗೆ ಮೊನ್ನೆ ಕೊಟ್ಟಾಗ ದಿನಸಿ ಸಿಕ್ಕಿಲ್ಲ ಕೆಲವರು 5-6 ಪ್ಯಾಕೇಟ್‍ಗಳನ್ನು ತೆಗೆದುಕೊಂಡು ಹೋಗಿಇದ್ದಾರೆ, ನಿಮಗೆ ಬುದವಾರ ಬೆಳಗ್ಗೆ ಕೊಡುತ್ತೇವೆಂದು ಹೇಳಿದ್ದರು ಅದರಂತೆ ನಾವು ಬಂದಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. 
    ಇಷೆಲ್ಲದರ ಮದ್ಯೆ ಆಗಮನಿಸಿದ ಎ.ಪಿ.ಎಂ.ಸಿ ಸೆಕ್ಯೂರಿಟಿ ಗಾಡ್ ಒಬ್ಬರು ಇಂದು ಕೊಡುವುದಿಲ್ಲವೆಂದು ತಿಳಿಸಿದರು. ಇದರಿಂದ ಸ್ಥಳದಲ್ಲಿದ್ದ ಕೆಲವರು ಅವರ ಜೊತೆ ವಾಗ್ವಾದ ತೆಗೆದು ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂದು ತಿಳಿದು ಖಾಲಿ ಕೈನಲ್ಲಿ ಮನೆಯತ್ತ ಮರಳಿದರು.
     ಈಗಲಾದರು ಸಂಬಂದಿಸಿದವರು ಕೊಡುವುದಾದರೆ ಒಂದು ದಿನ ಮುಂಚಿತವಾಗಿ ತಿಳಿಸಿ, ಕೊರೊನಾ ಮಹಾಮಾರಿ ಬೆನ್ನಹಿಂದೆ ಇರುವಾಗ ಈ ರೀತಿ ಮಹಿಳೆಯರು ಮಕ್ಕಳೆನ್ನದೇ ಸಾಮಾಜಿಕ ಅಂತರವನ್ನು ಮರೆತು ಕೂರದಿರುವಂತೆ ಮಾಡಬೇಕಾಗಿರುವುದು ಯಾರ ಜವಾಬ್ದಾರಿಯೋ ತಿಳಿಯದಾಗಿದೆ.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link