ಗುಬ್ಬಿ:
ತಾಲ್ಲೂಕಿನ ಬಾಗೂರು ಗೇಟ್ನಲ್ಲಿ ಜನವರಿ 14 ಹಾಗೂ 15 ರಂದು ನಡೆಯುವ ರಾಜ್ಯ ಮಟ್ಟದ ಶ್ರೀಸಿದ್ದರಾಮ ಜಯಂತಿ ಮಹೋತ್ಸವವು ಅತ್ಯಂತ ಶ್ರಧ್ದಾ ಭಕ್ತಿಯಿಂದ ನಡೆಯಲಿದ್ದ ಈ ಮಹೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಗಳಂದ ಸುಮಾರು 3 ರಿಂದ 4 ಲಕ್ಷ ಭಕ್ತಾಧಿಗಳು ಭಾಗವಹಿಸಲಿದ್ದು 40 ಎಕರೆ ಪ್ರಧೇಶದಲ್ಲಿ ಬೃಹತ್ ಪ್ರಮಾಣದ ವೇದಿಕೆ ಸಿದ್ದ ಮಾಡಲು ಇಂದು ಅಧೀಕೃತವಾಗಿ ಚಾಲನೆ ನೀಡುತ್ತಿರುವುದಾಗಿ ಬೆಟ್ಟದಹಳ್ಳಿ ಮಠದ ಶ್ರೀಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬಾಗೂರು ಗೇಟಿನ ಮುಂಭಾಗದಲ್ಲಿ ಶ್ರೀಸಿದ್ದರಾಮೇಶ್ವರ ಜಯಂತಿಗೆ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ರಾಜ್ಯದಾಧ್ಯಂತ ಜಯಂತಿ ಮಹೋತ್ಸವಕ್ಕೆ ಬರುವಂತಹ ಶರಣರಿಗೆ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜೊತೆಗೆ ದಾಸೋಹಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪ್ರತ್ಯೇಕ ವಿಭಾಗಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಆಗಮಿಸುವ ಅತಿಥಿಗಳಿಗೆ ಬೃಹತ್ ವೇದಿಕೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಯಾವುದಕ್ಕೂ ಸಮಸ್ಯೆಯಾಗದಂತೆ ಇಂದಿನಿಂದಲೆ ಬೃಹತ್ ಪ್ರಮಾಣದ ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಜಯಂತಿ ಮಹೋತ್ಸವದ ಅಂಗವಾಗಿ ಜನವರಿ 14 ರಂದು ನಿಟ್ಟೂರಿನಿಂದ ಬಾಗೂರಿನ ಗೇಟಿನವರೆಗೂ ಹಲವು ರೀತಿಯ ಸಾಂಸ್ಕತಿಕ ಕಲಾತಂಡಗಳು ಹಾಗೂ ಶ್ರೀಸಿದ್ದರಾಮೇಶ್ವರ ಸ್ವಾಮಿಯವರ ಮೆರವಣಿಗೆ ಮೂಲಕ ಸಮಾರಂಭದ ಸ್ಥಳಕ್ಕೆ ಆಗಮಿಸಿ ಧ್ವಜಪೂಜೆ ಮಾಡುವ ಮೂಲಕ ವೇದಿಕೆಯೆ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಆರಂಭವಾಗುತ್ತವೆ ಎಂದು ತಿಳಿಸಿದ ಅವರು ಈಗಾಗಲೆ ಜಯಂತಿ ಮಹೋತ್ಸವಕ್ಕೆ ಅಗತ್ಯ ಪೂರ್ವ ಭಾವಿಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ತಾಲ್ಲೂಕಿನಾಧ್ಯಂತ ಈಗಾಗಲೆ ಶ್ರೀಸಿದ್ದರಾಮ ರಥವು ಸಂಚಾರ ಮಾಡುತ್ತಿದ್ದು ಸಾರ್ವಜನಿಕರಿಂದ ಹೆಚ್ಚಿನ ಸಹಕಾರ ಬರುತ್ತಿದೆ ಭಕ್ತಾಧಿಗಳು ಇನ್ನೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ಸೇರಿ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಿತಿಯ ಕಾರ್ಯಧ್ಯಕ್ಷರಾದ ಮೋಹನ್ ಕುಮಾರ್, ಶಂಕರಾನಂದ, ಜಿ.ಎಸ್.ಪ್ರಸನ್ನಕುಮಾರ್, ಎಸ್.ಡಿ ದಿಲೀಪ್ಕುಮಾರ್. ಮುಖಂಡರಾದ ಸಿದ್ದಲಿಂಗಮೂರ್ತಿ, ಪತ್ರೆದಿನೇಶ್, ನಿರಂಜನ್ಮೂರ್ತಿ, ರವೀಶ್, ನಟರಾಜು, ಬಸವಲಿಂಗಯ್ಯ, ಯೋಗಿಶ್, ರಮೇಶ್ ಸೇರಿದಂತೆ ಹಲವು ಮುಖಂಡರು ಮತ್ತು ಭಕ್ತಾಧಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
