ಬಣ್ಣ ಬಣ್ಣದ ಆಹಾರಕ್ಕೆ ಮರುಳಾಗಿ ಆರೋಗ್ಯ ಕಳೆದುಕೊಳ್ಳಬೇಡಿ : ಉಜ್ಜಜ್ಜಿ ರಾಜಣ್ಣ

ತಿಪಟೂರು 

       ಇಂದು ನಾವು ಸೇವಿಸುವ ಆಹಾರದಲ್ಲಿ ಬಣ್ಣದ ಆಹಾರಕ್ಕೆ ಮರುಳಾಗಿ ಆರೋಗ್ಯ ಕಳೆದುಕೊಳ್ಳಬೇಡಿ ಎಂದು ಪ್ರಗತಿಪರ ಚಿಂತಕ ಹಾಗು ಹಿರಿಯ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಕರೆನೀಡಿದರು.

         ನಗರದ ಗಾಂಧಿನಗರದ ಕೇಂಬ್ರಿಡ್ಜ್ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಇಂದು ನಗರದ ನಾನಾ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳು ನಡೆಯುತ್ತಿವೆ ಆದರೆ ಗಾಂಧಿನಗರವು ನಗರದಲ್ಲೆ ಹಿಂದುಳಿದ ಪ್ರದೇಶವಾಗಿದ್ದು ಕಡುಬರವರು ಇರುವ ಪ್ರದೇಶವಾಗಿದ್ದು ಇಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯ ಅದು ನಗರಸಭೆಯ ಕರ್ತವ್ಯ ಎಂದ ಅವರು ಯಾವುದೇ ನಗರಸಭೆಯ ಆರೋಗ್ಯ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ನಗರಸಭೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

        ಇಂದು ನಗರದ ನಾನಾಭಾಗಗಳಲ್ಲಿ ಶುದ್ಧತೆ ಇಲ್ಲದ ಆಹಾರವನ್ನು ಸರಬರಾಜು ಮಾಡುತ್ತಿದ್ದು ಅವುಗಳನ್ನು ಪರೀಕ್ಷಿಸುವ ವ್ಯವದಾನವು ಕೂಡ ನಗರಸಭೆಯ, ಇಂದು ಬೇಕರಿಗಳಲ್ಲಿ ಬಳಸುತ್ತಿರುವ ಬಣ್ಣ ಬಣ್ಣದ ಆಹಾರಗಳಿಗೆ ನೀವು ಮಾರುಹೋಗುತ್ತಿದ್ದೀರಾ ಆದರೆ ಅವುಗಳಿಗೆ ಬಳಸುವ ಬಣ್ಣಗಳು ರಾಸಾಯನಿಕಗಳಿಂದ ಕೂಡಿದ್ದು ಅವುಗಳನ್ನು ಯಾರೂ ಪರೀಕ್ಷಿಸುತ್ತಿಲ್ಲ ಇವುಗಳನ್ನು ಸೇವಿಸಿ ಕಾಯಿಲೆಗಳು ಬಂದರೆ ಹಣಖರ್ಚಾಗುತ್ತದೆ ಎಂದು ಹೆದರಿ ನೋವನ್ನು ಅನುಭವಿಸಿ ಸಾಯುತ್ತಾರೆ ಮೊದಲು ಹೇಳುತ್ತಿದ್ದರು ಸ್ವಲ್ಪಬಿಸಿ ಆಹಾರವನ್ನು ತಿನ್ನು ಖಾಯಿಲೆ ಬೇಗ ಗುಣವಾಗುತ್ತದೆ ಎನ್ನುತ್ತದ್ದರು, ಆದರೆ ನಾವಿದು ಸಿದ್ದವಿರುವ ಆಹಾರದ ಹಿಂದೆಬಿದ್ದಿದ್ದೇವೆ ಆದನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು ಈಗಿನಿಂದಲೇ ಜಾಗೃತರಾಗಬೇಕೆಂದರು.

        ಇಂತಹ ಪ್ರದೇಶದಲ್ಲಿ ಪ್ರತಿವರ್ಷ ಉಚಿತ ಆರೋಗ್ಯ ಶಿಬಿರಗಳನ್ನು ಎರ್ಪಡಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿರುವ ಇಂತಹ ಸಂಘಟನೆಗಳ ಕಾರ್ಯ ಮೆಚ್ಚುವಂತಹದ್ದು ಎಂದರು, ಜಯಕರ್ನಾಟಕ ಸಂಘಟನೆಯ ರಾಜ್ಯ ಆರೋಗ್ಯ ಘಟಕದ ರಾಜ್ಯಾದ್ಯಕ್ಷರಾದ ಉಮಾವತಿ ಚಂದ್ರಪ್ಪ ಮಾತನಾಡಿ ಈ ಉಚಿತ ಆರೋಗ್ಯ ಶಿಬಿರದಲ್ಲಿ ನಮ್ಮ ಜಯಕರ್ನಾಟಕ ಸಂಘಟನೆಯು ಇಂದು ರಾಜ್ಯದಲ್ಲೆ ಇಂತಹ ನೂರಾರು ಕಾರ್ಯಕ್ರಮಗಳನ್ನು ನಮ್ಮ ರಾಜ್ಯಾದ್ಯಕ್ಷರಾದ ಮುತ್ತಪ್ಪ ರೈ ರವರ ಮಾರ್ಗದರ್ಶನದಲ್ಲಿ ನೆಡೆಸುತ್ತಿದ್ದು ಮುಂದೆಯು ಇಂತಹ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು, ಈ ಶಿಬಿರದಲ್ಲಿ ಉಚಿತ ಹೃದಯ ರೋಗ, ನರ ರೋಗ, ಮೂತ್ರಪಿಂಡದಲ್ಲಿ ಕಲ್ಲು, ಕ್ಯಾನ್ಸರ್, ಕಣ್ಣಿನ ತಪಾಸಣೆ, ಮಧುಮೇಹ, ರಕ್ತದೊತ್ತಡ ತಪಾಸಣೆಯನ್ನು ಮಾಡಲಾಗುವುದು ಎಂದ ಅವರು ಸಂಘಟನೆಗಳು ಕೇವಲ ಯಾವುದೋ ಒಂದು ಕಾರ್ಯಕ್ಕೆ ಸೀಮಿತವಾಗದೆ ಇಂತಹ ಜನಪರ ಕಾರ್ಯಗಳನ್ನು ಮಾಡುತ್ತೀರುವುದು ನಮಗೆ ಹೆಮ್ಮೆ ಎಂದರು.

         ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಶಾಲೆಯ ಕಾರ್ಯದರ್ಶಿ ಪಿ.ಮುರಳಿಕೃಷ್ಣ ಮುಖ್ಯಶಿಕ್ಷಕಿ ರೂಪ, ವಕೀಲರಾದ ಮಡೇನೂರು ಬಸಪ್ಪ, ಸಮಾಜಸೇವಕ ಹಿದಾಯತ್, ಪೈರೋಜ್, ಜಯಕರ್ನಾಟಕ ಸಂಘಟನೆಯ ಬಿ.ಟಿ.ಕುಮಾರ್, ಇಮ್ರಾನ್‍ಖಾನ್, ಖಲಂದರ್ ಮುಂತಾದವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link