ಶಿರಾ
ನಗರದ ಅಂಬೇಡ್ಕರ್ ಭವನಕ್ಕೆ ಶಾಸಕ ಬಿ.ಸತ್ಯನಾರಾಯಣ್ ಸೋಮವಾರ ಭೇಟಿ ನೀಡಿ ಉದ್ಯಾನವನ ವೀಕ್ಷಣೆ ಮಾಡಿದರು.
ಶಿರಾ-ಅವiರಾಪುರ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಉದ್ಯಾನವನದ ಜಾಗವು ಒಂದಿಷ್ಟು ತೆರವುಗೊಂಡಿದ್ದು ಹಾಲಿ ಉಳಿದ ಉದ್ಯಾನವನ್ನು ಹೆಚ್ಚಿನ ಅಭಿವೃದ್ಧಿಪಡಿಸಲು ನಗರಸಭೆಗೆ ಸೂಚನೆ ನೀಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸದರಿ ಉದ್ಯಾನವನದ ಮಕ್ಕಳ ಆಟಿಕೆಯ ಸಾಮಗ್ರಿಗಳು ನಾಶಗೊಂಡಿದ್ದು, ಅವುಗಳನ್ನು ಸರಿಪಡಿಸುವುದರ ಜೊತೆಗೆ ಮತ್ತಷ್ಟು ಅನುದಾನದಡಿಯಲ್ಲಿ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ ಎಂದರು.ನಗರದ ವಿದ್ಯಾನಗರದ ಸಿಕಂತರ್ ಲೇಔಟ್ನಲ್ಲಿದ್ದ ಹಾಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲು 30 ಲಕ್ಷ ರೂ.ಗಳನ್ನು ಶಾಸಕರ ಅನುದಾನದಲ್ಲಿ ಒದಗಿಸಲಾಗಿದೆ. ಜೊತೆಗೆ ಈ ಉದ್ಯಾನವನದ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವೂ ಆಗಲಿದೆ ಎಂದರು.
ನಗರದ ವಿವಿಧ ಬಡಾವಣೆಗಳಲ್ಲಿರುವ ಎಲ್ಲಾ ಉದ್ಯಾನವನಗಳನ್ನು ಶೀಘ್ರದಲ್ಲಿಯೇ ವೀಕ್ಷಣೆ ಮಾಡುವುದರ ಜೊತೆಗೆ ಈ ಎಲ್ಲಾ ಉದ್ಯಾನವನಗಳ ಮತ್ತಷ್ಟು ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಶಾಸಕ ಬಿ.ಸತ್ಯನಾರಾಯಣ್ ಹೇಳಿದರು.
ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಬರಗೂರು ಶ್ರೀನಿವಾಸ್, ಜೆ.ಡಿ.ಎಸ್. ಮುಖಂಡರಾದ ಶಿರಾ ರವಿ, ಕೋಟೆ ರವಿ, ಅರೆಹಳ್ಳಿ ಬಾಬು, ದ್ವಾರಕಾನಾಥ್, ಸುರೇಶ್(ಪಾಯ), ದ್ವಾರಾಳು ವಿವೇಕಾನಂದ, ತಾ.ಪಂ. ಸದಸ್ಯ ಪಾಂಡುರಂಗಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
