ಬೇಡಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯ

ಹರಪನಹಳ್ಳಿ:

         ಬೇಡಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಫೆ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಯು ಬೃಹತ್ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯದ್ಯಕ್ಷ ವೀರೇಂದ್ರ ಪಾಟೀಲ್ ಹೇಳಿದರು.

         ಪಟ್ಟಣದ ತೆಗ್ಗಿನಮಠದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ 40ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜಂಗಮರಿದ್ದು, ರಾಜ್ಯದ 90 ವಿಧಾನಸಭಾ ಕ್ಷೇತ್ರದಲ್ಲಿ ಜಂಗಮ ಮತದಾರರಿದ್ದರೂ ಸಹ ಈ ಸಮಾಜವನ್ನು ರಾಜಕೀಯ ಷಡ್ಯಂತ್ರದಿಂದ ತುಳಿಯುತ್ತಿದ್ದಾರೆ ಎಂದರು.

        ಸ್ವಾತಂತ್ರ್ಯದ ನಂತರವು ಸಂವಿಧಾನ ಅನುಸೂಚಿತ ಜಾತಿಗಳ ಆದೇಶ 1950ರ ಅಡಿಯಲ್ಲಿ ಜಂಗಮರು ಕಾಯಕ ಜೀವಿಗಳು, ಕಾಯಕ ಮಾಡಿ ಬೇಡುವವರಾಗಿದ್ದಾರಿಂದ ಜಂಗಮ ಪದದ ಹಿಂದೆ ಬೇಡ ಸೇರಿಸಿ ಆ ಮೂಲಕ ಗುರುತಿಸಿ ಮೀಸಲಾತಿ ಕಲ್ಪಿಸಿದೆ ಆದರೆ ಬೇಡಜಂಗಮರ ಸಾಂವಿಧಾನಿಕ ಹಕ್ಕನ್ನು ಇಲ್ಲಿಯವರೆಗೂ ಆಳುವ ಸರಕಾರಗಳು ಹರಣಮಾಡಿವೆ. ಡಾ.ಬಿ.ಆರ್.ಅಂಬೇಡ್ಕರವರ ಆಶೆಯಗಳಿಗೆ ತಿಲಾಂಜಲಿ ಇಟ್ಟಿವೆ ಎಂದು ಹೇಳಿದರು.

          ಫೆ.24 ಮತ್ತು 25ರಂದು ಎರಡು ದಿನಗಳ ಕಾಲ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದ್ದು ಬೃಹತ್ ಪ್ರತಿಭಟನೆಯ ನೇತೃತ್ವವನ್ನು ರಾಷ್ಟ್ರೀಯ ಅಧ್ಯಕ್ಷರಾದ ಕೋಳದಮಠದ ಶ್ರೀ ಶಾಂತವೀರ ಮಹಾಸ್ವಾಮಿಜಿ ಸಾನಿಧ್ಯವಹಿಸುವರು. ಇದೇ ಸಂದರ್ಭದಲ್ಲಿ ಜಾತಿಪ್ರಮಾಣ ಪತ್ರವನ್ನು ನಿರಂತಕವಾಗಿ ವಿತರಣೆ ಮಾಡಬೇಕು, ಪ್ರತ್ಯೇಕವಾಗಿ ಬೇಡಜಂಗಮ ನಿಗಮ ಅಭಿವೃದ್ಧಿ ಮಂಡಳಿ ರಚಿಸಬೇಕು, ಶ್ರೀ ರೇಣುಕಾಚಾರ್ಯರರ ಜಯಂತಿಯನ್ನು ಯುಗಾದಿಯಂದು ಸರಕಾರ ರಜೆ ರಹಿತವಾಗಿ ಆಚರಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ರಾಜ್ಯಪಾಲರ ಮೂಲಕ ಕೇಂದ್ರ ಸರಕಾರಕ್ಕೆ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಎಸ್‍ಯಡಿಯೂರಪ್ಪ, ಹೆಚ್.ಡಿ.ದೇವೆಗೌಡರಿಗೆ ಮನವಿ ಸಲ್ಲಿಸಲಾಗುವುದು. ಈ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಲಕ್ಷಾಂತರ ಬೇಡಜಂಗಮರು ಪಾಲ್ಗೊಳ್ಳುವರು. ತಾಲ್ಲೂಕಿನಿಂದಲೂ 2ಸಾವಿರ ಜಂಗಮರು ಭಾಗವಹಿಸಲಿದ್ದಾರೆ ಆದ್ದರಿಂದ ರಾಜ್ಯದ ಬೇಡಜಂಗಮರು ತಮ್ಮ ಹಕ್ಕುಗಳಿಗಾಗಿ ಹೋರಾಟದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link