ಸಿಇಟಿಗೆ 1,460 ಅಭ್ಯರ್ಥಿಗಳು ಗೈರು

ದಾವಣಗೆರೆ:

      ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೋಮವಾರ ನಗರದ 16 ಕೇಂದ್ರಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ 1,460 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.ಸೋಮವಾರ ಬೆಳಗ್ಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ ಗಣಿತ ಪರೀಕ್ಷೆ ನಡೆಯಿತು. ಒಟ್ಟು 7,938 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಅದರಲ್ಲಿ ಜೀವಶಾಸ್ತ್ರ ವಿಷಯದಲ್ಲಿ 935 ವಿದ್ಯಾರ್ಥಿಗಳು ಗೈರಾಗಿದ್ದರು. ಗಣಿತ ಪರೀಕ್ಷೆಗೆ 525 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಬೆಳಗ್ಗೆ ಪರೀಕ್ಷೆಯಲ್ಲಿ 7,003, ಮಧ್ಯಾಹ್ನ 7,413 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಯಾವುದೇ ಗೊಂದಲ ಮತ್ತು ನೂನ್ಯತೆಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

      ನಗರದ ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜು, ಎವಿಕೆ ಮಹಿಳಾ ಕಾಲೇಜು, ಎಆರ್‍ಜಿ ಪಿಯು ಕಾಲೇಜು, ಸರ್ಕಾರಿ ಪಿಯು ಕಾಲೇಜು, ಡಿಆರ್‍ಎಂ ಪಿಯು ಕಾಲೇಜು, ಶ್ರೀ ಸಿದ್ಧಗಂಗಾ ಪಿಯು  ಕಾಲೇಜು, ತರಳಬಾಳು ಜಗದ್ಗುರು ಪಿಯು ಕಾಲೇಜು, ಸರ್ಕಾರಿ(ಎಕ್ಸ್ ಮುನ್ಸಿಪಲ್) ಪಿಯು ಕಾಲೇಜು, ಅಥಣಿ ಸಂಯುಕ್ತ ಪಿಯು ಕಾಲೇಜು, ರಾಜನಹಳ್ಳಿ ಸೀತಮ್ಮ ಬಾಲಕಿಯರ ಪಿಯು ಕಾಲೇಜು, ಅಜ್ಜಂಪುರ ಗೋವಿಂದ ಸ್ವಾಮಿ ಭಾಗ್ಯಲಕ್ಷ್ಮಿ ಕಾಂಪೋಜಿಟ್ ಪಿಯು ಕಾಲೇಜು.ಜಿಎಂ ಹಾಲಮ್ಮ ಸ್ವತಂತ್ರ ಪಿಯು ಕಾಲೇಜು, ಮಾಗನೂರು ಬಸಪ್ಪ ಪಿಯು ಕಾಲೇಜು, ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಪಿಯು ಕಾಲೇಜು, ಸೇಂಟ್ ಜಾನ್ಸ್ ವಿಜ್ಞಾನ ಪಿಯು ಕಾಲೇಜು, ಸರೋಜಲಿಂಗಮ್ಮ ಪಿಯು ಕಾಲೇಜು ಪರೀಕ್ಷೆ ನಡೆಯಿತು. ಇಂದು (ಏ.30) ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರದ ಪರೀಕ್ಷೆಗಳು ನಡೆಯಲಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link