ಹುಳಿಯಾರು:
ಭಾರಿ ಮಳೆಗಾಳಿಗೆ ಒಮದು ಟಿಸಿ ಕಂಬ ಸೇರಿದಂತೆ 7 ವಿದ್ಯುತ್ ಕಂಬಗಳು ಧರೆಗುಳಿದ ಘಟನೆ ಹುಳಿಯಾರು ಹೋಬಳಿಯ ಭೈರಾಪುರ ವ್ಯಾಪ್ತಿಯಲ್ಲಿ ಜರುಗಿದೆ.ಬೈರಾಪುರದ ಪಂಪ್ ಸೆಟ್ ಮಾರ್ಗದ ಒಮದು ಟಿಸಿ ಮತ್ತು 4 ಕಂಬಗಳು, ಬರಕನಹಾಲ್ ತಾಂಡ್ಯದ ಒಂದು ವಿದ್ಯುತ್ ಕಂಬ ಹಾಗೂ ಕಮಲ್ ಸಾಬ್ ಪಾಳ್ಯದ ಒಂದು ಕಂಬಗಳು ಧರೆಗುರುಳಿವೆ. ಇದರಿಂದ ಈ ಭಾಗದಲ್ಲಿ ಬರುವ ರೈತರ ಪಂಪ್ ಸೆಟ್ಗೆ ವಿದ್ಯುತ್ ವ್ಯತ್ಯಯವಾಗಿತ್ತು.
ತಕ್ಷಣ ಬೆಸ್ಕಾಂ ಶಾಖಾಧಿಕಾರಿ ಉಮೇಶ್ನಾಯ್ಕ ಅವರ ನೇತೃತ್ವದಲ್ಲಿ ಪವರ್ ಮ್ಯಾನ್ಗಳು ಕಮಲ್ ಸಾಬ್ ಪಾಳ್ಯದ ಕಂಬ ಮರು ಜೋಡಿಸಿ ಎಂದಿನಂತೆ ವಿದ್ಯುತ್ ಸರಬರಾಜು ನೀಡಿದರು. ಆದರೆ ಬರಕನಹಾಲ್ ತಾಂಡ್ಯದ ಬಳಿ ವಿದ್ಯುತ್ ವೈರ್ ಬಿದ್ದಿರುವ ಮರದಲ್ಲಿ ಹೆಜ್ಜೇನುಗಳಿದ್ದು ವೈರ್ ಬಿಡಿಸಿಕೊಳ್ಳಲು ತೊಂದರೆ ಮಾಡಿತ್ತು.ಪರಿಣಾಮ ಈ ಭಾಗದಲ್ಲಿ ಕಂಬಗಳ ಮರುಜೋಡಣಾ ಕಾರ್ಯಕ್ಕೆ ತೊಡಕಾಗಿದ್ದು ಶನಿವಾರ ಹೆಚ್ಚೆನು ಓಡಿಸುವವರ ಸಹಾಯ ಪಡೆದು ವೈರ್ ಬಿಡಿಸಿಕೊಂಡು ಕಂಬಗಳನ್ನು ಜೋಡಿಸಿ ಎಂದಿನಂತೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಉಮೇಶ್ ನಾಯ್ಕ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ