ಮೂಢ ನಂಬಿಕೆಗಳ ಕುರಿತು ಅರಿವು ಕಾರ್ಯಕ್ರಮ

ಜಗಳೂರು:

      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಮುದಾಯಗಳ ಅಭಿವೃದ್ದಿಗಾಗಿ ಸರ್ಕಾರ ಹಿಂದುಳಿದ ಅಭಿವೃದ್ದಿ ನಿಗಮ, ಅಲೆಮಾರಿ , ಅರೆ ಅಲೆಮಾರಿ ಅಭಿವೃದ್ದಿ ನಿಗಮದ ವತಿಯಿಂದ 400 ಕೋಟಿಗಳನ್ನು ಹಣವನ್ನು ಮೀಸಲಿಟ್ಟಿದೆ ಎಂದು ಬಿಸಿಎಂ ಇಲಾಖೆ ತಾಲೂಕು ವಿಸ್ತರಣಾಧಿಕಾರಿ ಸಿ.ಆರ್ ವೆಂಕಟೇಶ್ ಮೂರ್ತಿ ಹೇಳಿದರು. 

       ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ತಾಲೂಕಾಡಳಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಾಯೋಗದಲ್ಲಿ ಆಯೋಜಿಸಿದ್ದ ಮೂಢ ನಂಬಿಕೆಗಳ ಕುರಿತು ಅರಿವು ಕಾರ್ಯಕ್ರಮವನ್ನದ್ದೇಶಿಸಿ ಅವರು ಮಾತನಾಡಿದರು.

      ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ, ಅಲೆಮಾರಿ ಜನಾಂಗದ ಹಟ್ಟಿಗಳಿಗೆ ಮೂಲಭೂತ ಸೌಲಭ್ಯಗಳು, ಶಿಕ್ಷಣ, ಆರೋಗ್ಯ, ಇತರೆ ಸೇವೆಗಳನ್ನು ಒದಗಿಸುವ ಮೂಲಕ ಅಭಿವೃದ್ದಿ ಪಡಿಸಲಾಗುವುದು. ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳು ಸಮುದಾಯಗಳ ಅಭಿವೃದ್ದಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

        ಕಾಡುಗೊಲ್ಲ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಿದ್ದೇಶ್ ಯಾದವ್ ಮಾತನಾಡಿ, ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರನ್ನು ಮುಟ್ಟು ಮೈಲಿಗೆ ಹೆಸರಿನಲ್ಲಿ ಹೊರಗಿಡುವ ಪದ್ದತಿ ನಡೆಯುತ್ತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಯುವಕರು ಹಟ್ಟಿಯ ಸಂಪ್ರಾದಾಯಗಳನ್ನು ಬದಲಾಯಿಸಿದ್ದು ಸುಧಾರಣೆ ಕಂಡಿವೆ. ಹಿಂದಿನ ಕಾಲದಲ್ಲಿ ಸೌಲಭ್ಯಗಳು ಇಲ್ಲದ ಕಾರಣವಾಗಿ ಈ ರೀತಿಯ ಆಚರಣೆಗಳನ್ನು ನಡೆಯುತ್ತಿದ್ದವು. ಸರ್ಕಾರ ಗೊಲ್ಲರಹಟ್ಟಿಗಳಿಗೆ ಇಟ್ಟಂತ ಮೀಸಲು ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸಿಸಿ ರಸ್ತೆಗಿಂತ ಮುಖ್ಯವಾಗಿ ವಸತಿ, ಶೌಚಗೃಹ, ಕುಡಿಯುವ ನೀರು, ಕಲ್ಪಿಸುವ ಕಡೆ ಸರ್ಕಾರ ಚಿಂತಿಸಬೇಕಿದೆ, ಶೈಕ್ಷಣಿಕ ಅಭಿವೃದ್ದಿಗೆ ಇಲಾಖೆ ಸಾಕಷ್ಟು ಹಣ ನಿಯೋಗಿಸಿದೆ ಸಮುದಾಯದ ಯುವಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

      ಈ ಸಂದರ್ಭದಲ್ಲಿ ಗ್ರಾ. ಪಂ ಸದಸ್ಯರಾದ ತಿಪ್ಪಮ್ಮ ರಾಮಪ್ಪ, ತಿಮ್ಮಾರಾಯಪ್ಪ, ಮಾಜಿ ಸದಸ್ಯ ಎಚ್.ಪಿ ಪಾಲಪ್ಪ, ನಿವೃತ್ತ ಎಎಸ್‍ಐ ನಾಗರಾಜ್, ಸಿಡಿಪಿಒ ಇಲಾಖೆ ನೂರ್‍ಜಾನ್, ಬಿಸಿಎಂ ಇಲಾಖೆ ಮಾರಪ್ಪ ಇಪ್ಟ ಕಲಾವಿದರಾದ ರೇವಣ್ಣ ನಾಯ್ಕ, ಲೋಕಿಕೆರೆ ಅಂಜಿನಪ್ಪ, ಬಡಪ್ಪ, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಸೇರಿದಂತೆ ಮತ್ತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link