ಬೆಂಗಳೂರು
ಮೋಜಿನ ಜೀವನ ನಡೆಸಲು ಕನ್ನಗಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಕನ್ನಗಳ್ಳರು ದುಬಾರಿ ಬೈಕ್ಗಳನ್ನು ದೋಚುತ್ತಿದ್ದ ಇಬ್ಬರು ಸೇರಿ 6 ಮಂದಿ ಕುಖ್ಯಾತ ಕಳ್ಳರನ್ನು ಬೇಗೂರು ಪೊಲೀಸರು ಬಂಧಿಸಿ 47 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡಿದ್ದ ಮೈಲಸಂದ್ರದ ಬೈರೇಗೌಡ (32), ಬೊಮ್ಮನಹಳ್ಳಿಯ ಸುಕುಮಾರ್ (21), ಗಾರ್ವೆಬಾವಿ ಪಾಳ್ಯದ ಪ್ರತಾಪ್ (28), ಬೇಗೂರಿನ ಜಗದೀಶ್ ಅಲಿಯಾಸ್ ಜಕ್ಕ (23)ನನ್ನು ಬಂಧಿಸಿ ಗಂಭೀರ ಸ್ವರೂಪದ 10 ಕನ್ನಗಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಇದಲ್ಲದೆ ರಾಯಲ್ ಎನ್ಫೀಲ್ಡ್, ಕೆಟಿಎಂ ಡ್ಯೂಕ್ ಸೇರಿದಂತೆ ದುಬಾರಿ ಬೈಕ್ಗಳನ್ನು ಕಳವು ಮಾಡಿ ಮೋಜು ಮಾಡುತ್ತಿದ್ದ ಮಂಡ್ಯದ ಕೆಬ್ಬಳ್ಳಿಯ ಕೀರ್ತಿ (20), ಸಿಂಗ್ಸಂದ್ರದ ಸೈಯದ್ ಇಮ್ರಾನ್ (21)ನನ್ನು ಬಂಧಿಸಿ ಒಟ್ಟು 15 ಕಳವು ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಆರೋಪಿಗಳಿಂದ 17 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಹಾಗೂ 25 ಲಕ್ಷ ಮೌಲ್ಯದ 11 ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗಳು 2 ಕೆಟಿಎಂ ಡ್ಯೂಕ್, 1 ಪಲ್ಸರ್, 1 ಡಿಯೋ ಸೇರಿ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಬ್ಯಾಟರಾಯನಪುರ, ಹೆಬ್ಬಾಳ, ಕುಮಾರಸ್ವಾಮಿ ಲೇಔಟ್, ಕೆಂಗೇರಿ, ವರ್ತೂರ್, ಪೀಣ್ಯ, ಬೊಮ್ಮನಹಳ್ಳಿ, ಕೆಸ್ತೂರು, ಶಿವಮೊಗ್ಗ, ರಾಮನಗರ, ಮೈಸೂರು, ನಾಗಮಂಗಲ ಪೊಲೀಸ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/royalenfield-kMxG-621x414@LiveMint.gif)