ಉಡುಪಿ ಕೃಷ್ಣನ ಆಶೀರ್ವಾದ ಪಡೆದ ಇಸ್ರೋ ಅಧ್ಯಕ್ಷ..!!

ಉಡುಪಿ

   ಭಾರತದ ಭಾಹ್ಯಾಕಾಶ ಸಂಸ್ಥೆ “ಇಸ್ರೋ” ಅಧ್ಯಕ್ಷ ಡಾ.ಕೆ. ಶಿವನ್‌ ಅವರು ಭಾನುವಾರದಂದು  ಉಡುಪಿಯ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದರು.

   ಇದೇ ಜು. 15ರಂದು ನಡೆಯಲಿರುವ ಚಂದ್ರಯಾನ-2ರ ಯಶಸ್ವಿ ಉಡಾವಣೆ ಮತ್ತು ಕಾರ್ಯಾಚರಣೆಗಾಗಿ ಕೃಷ್ಣ ಮಠದಲ್ಲಿ ಶ್ರೀಕೃಷ್ಣನಿಗೆ   ವಿಶೇಷ ಪ್ರಾರ್ಥನೆ ಸಲ್ಲಿಸಿ ,ಬಳಿಕ ಅವರು ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

    ಕೊಲ್ಲೂರ ಮೂಕಾಂಬಿಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು ಮತ್ತು ಅವರ ಕುಟುಂಬದ ಜೊತೆಯಲ್ಲಿ ಇಸ್ರೋದ ನಾಲ್ವರು ಸದಸ್ಯರು ಸಹ ಇದ್ದರು. ದೇಗುಲದ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪನ ಸಮಿತಿಯ ಸದಸ್ಯ ನರಸಿಂಹ ಹಳಗೇರಿ, ಅರ್ಚಕ ಡಾ. ಕೆ.ಎನ್‌. ನರಸಿಂಹ ಅಡಿಗ ಅವರು ಡಾ. ಕೆ. ಶಿವನ್‌ ಅವರನ್ನು ಸ್ವಾಗತಿಸಿ ಗೌರವಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap