ಎನ್.ಡಿ.ಎ ಸರ್ಕಾರದಲ್ಲಿ ಉದ್ಯೋಗ ಪ್ರಮಾಣದಲ್ಲಿ ಕುಸಿತ : ರಾಹುಲ್

ಹಾವೇರಿ

         ಕಳೆದ ಐದು ವರ್ಷಗಳಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದಲ್ಲಿ ಉದ್ಯೋಗ ನೀಡುವ ಪ್ರಮಾಣದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ಬರುವ ಲೋಕಸಭಾಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಬಡವರಿಗೆ ಕನಿಷ್ಠಆದಾಯ ಖಾತರಿ ನೀಡುವ ಕಾನೂನು ಜಾರಿಗೆತರಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

        ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಪಕ್ಷದಕಾರ್ಯಕರ್ತರ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆಬಂದಲ್ಲಿ ಕನಿಷ್ಠ ಆದಾಯ ನೀಡುವ ಮಸೂದೆಮಂಡಿಸಲಾಗುವುದು. ಇದರಿಂದ ಉದ್ಯೋಗ ದೊರೆಯದಯುವ ಸಮೂಹಕ್ಕೆ ಹೆಚ್ಚಿನ ರೀತಿಯಲ್ಲಿಅನುಕೂಲವಾಗಲಿದೆ. ಪ್ರತಿಯೊಬ್ಬರ ಖಾತೆಗೂ ನೇರವಾಗಿಹಣ ಜಮಾ ಮಾಡಲಾಗುವುದು ಎಂದು ಹೇಳಿದರು.

        ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಸರ್ಕಾರ ಕನಿಷ್ಠ ಆದಾಯಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಹೆಚ್ಚು ಯುವ ಜನಾಂಗಕ್ಕೆ ಅನುಕೂಲವಾಗುತ್ತಿದೆ. ಈಕಾರ್ಯಕ್ರಮದಿಂದ ಹೆದರಿಕೊಂಡಿರುವ ಪ್ರಧಾನಿ ಮೋದಿ,ಒಬ್ಬ ರೈತರಿಗೆ ಮೂರುವರೆ ರೂಪಾಯಿಯನ್ನು ಖಾತೆಗೆಜಮಾ ಮಾಡುವ ” ರೈತ ಸಮ್ಮಾನ್ ” ಯೋಜನೆಘೋಷಿಸಿದ್ದಾರೆ. ಸಣ್ಣ ಪ್ರಮಾಣದ ಹಣವನ್ನು ರೈತರಖಾತೆಗೆ ಜಮಾ ಮಾಡಲು ಮುಂದಾಗಿದೆ ಎಂದು ರಾಹುಲ್ಗಾಂಧಿ ಟೀಕಿಸಿದರು.

        ಕಳೆದ ಐದು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರರೈತರು, ಬಡವರ ಪರ ಆಡಳಿತ ನಡೆಸಿಲ್ಲ. ಕೆಲವುಕಾರ್ಪೋರೇಟ್ ಕಂಪೆನಿಗಳ ಪರವಾಗಿಕಾರ್ಯನಿರ್ವಹಿಸಿತು. ಸಣ್ಣ ಮತ್ತು ಮಧ್ಯಮ ಪ್ರಮಾಣದವ್ಯಾಪಾರಸ್ಥರು, ಸಣ್ಣ ಕೈಗಾರಿಕೆಗಳಿಗಾಗಿ ಈ ಸರ್ಕಾರಏನನ್ನೂ ಮಾಡಿಲ್ಲ ಎಂದು ಆಪಾದಿಸಿದರು.

        ಫ್ರಾನ್ಸ್ ಜತೆ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಲ್ಲಿಪ್ರಧಾನಿ ಮೋದಿ ಅವರು 30 ಸಾವಿರ ರೂ ಕಳ್ಳತನ ಮಾಡಿಅದನ್ನು ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದಾರೆ. ದೇಶದಪ್ರತಿಷ್ಠಿತ ಎಚ್ಎಎಲ್ ಸಂಸ್ಥೆಯ ಬದಲಿಗೆ ಅನಿಲ್ಅಂಬಾನಿ ಕಂಪೆನಿಯನ್ನು ಸಹಭಾಗಿದಾರ ಕಂಪೆನಿಯಾಗಿಆಯ್ಕೆ ಮಾಡಿಕೊಳ್ಳುವಂತೆ ಮೋದಿ ಅವರು ಫ್ರಾನ್ಸ್ಅಧ್ಯಕ್ಷರಿಗೆ ಸೂಚಿಸಿದ್ದರು. ದೇಶದ ತುಂಬೆಲ್ಲಾ ಅನಿಲ್ಅಂಬಾನಿ ಅದಾನಿ ಅವರದ್ದೇ ಹಾವಳಿಯಾಗಿದೆ.‌ ಪ್ರಧಾನಿಮೋದಿ ದೇಶದ ಚೌಕಿದಾರ ಅಲ್ಲ. ಅವರು ಅನಿಲ್ಅಂಬಾನಿ ಅದಾನಿಯವರ ಚೌಕಿದಾರ ಎಂದು ಟೀಕಿಸಿದರು.

       ಜಮ್ಮು – ಕಾಶ್ಮೀರದ ಪುಲ್ವಾಮದಲ್ಲಿ 40ಕ್ಕೂ ಹೆಚ್ಚುಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾದ ಘಟನೆಗೆಬಿಜೆಪಿಯೇ ನೇರ ಹೊಣೆಯಾಗಿದೆ. ಈ ದಾಳಿ ನಡೆಸಿದ್ದುಜೈಷ್ ಎ ಮೊಹಮ್ಮದ್ ಸಂಘಟನೆ. ವಿಮಾನದಲ್ಲಿದ್ದಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಅಪಹರಣಕಾರರ ಒತ್ತಡಕ್ಕೆ ಮಣಿದು ಅದರ ಮುಖ್ಯಸ್ಥಮಸೂದ್ ಅಜರ್ ಅವರನ್ನು ಭಾರತದ ಜೈಲಿನಿಂದಆಪ್ಘಾನಿಸ್ಥಾನದ ಕಂದಹಾರ್ ಗೆ ಕರೆದುಕೊಂಡು ಹೋಗಿದ್ದುಹಿಂದಿನ ಬಿಜೆಪಿ ಸರ್ಕಾರ. ಆಗ ಸಚಿವರಾಗಿದ್ದ ಜಸ್ವಂತ್ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ಅವರು ಸಹ ಭಯೋತ್ಪಾದಕರನ್ನು ಬಿಡುಗಡೆ ಮಾಡಲುಕಂದಹಾರ್ ಗೆ ತೆಳಿದ್ದರು. ಪುಲ್ವಾಮ ಘಟನೆ ಬಗ್ಗೆಪ್ರಸ್ತಾಪಿಸುವ ಮೋದಿ ಅವರು, ಮಸೂದ್ ಅಜರ್ಅವರನ್ನು ಬಿಡುಗಡೆ ಮಾಡಿದ್ದು ಯಾಕೆ ಎನ್ನುವುದನ್ನು ಸಹತಮ್ಮ ಭಾಷಣದಲ್ಲಿ ಹೇಳಬೇಕೆಂದು ರಾಹುಲ್ ಗಾಂಧಿಆಗ್ರಹಿಸಿದರು.

        ಡೋಕ್ಲಾಮ್ ನಲ್ಲಿ ಚೀನಾದ ಸೈನಿಕರು ಭಾರತದ ಗಡಿಭಾಗಕ್ಕೆ ನುಗ್ಗಿದಾಗ ನೀವು ಚೀನಾ ಅಧ್ಯಕ್ಷರ ಜತೆ ಗುಜರಾತ್ನಲ್ಲಿ ಮಾತುಕತೆಯಲ್ಲಿ ತೊಡಗಿದ್ದೀರಿ. ಸಮುದ್ರ ವಿಹಾರದಲ್ಲಿತಲ್ಲೀನರಾಗಿದ್ದೀರಿ. ಎಲ್ಲಿ ಹೋಯಿತು ನಿಮ್ಮ 56 ಇಂಚಿನಎದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

        ಪ್ರಧಾನಿ ಮೋದಿ ಭಾರತ ದೇಶವನ್ನು ಎರಡು ಭಾಗಮಾಡಿದ್ದಾರೆ. ಒಂದು ಭಾಗ ನೀರವ್ ಮೋದಿ, ಇನ್ನೊಂದುಅನಿಲ್ ಅಂಬಾನಿ ಅವರಂತಹ ನಾಯಕರಿಗೆ ಅನುಕೂಲಮಾಡಿಕೊಟ್ಟಿದ್ದಾರೆ. ವಿಜಯ್ ಮಲ್ಯಾ ದೇಶ ತೊರೆದುಹೋಗುವಾಗ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆಹೇಳಿ ಹೋಗುತ್ತಾರೆ. ದೇಶದ ಒಂದು ಭಾಗ ಶ್ರೀಮಂತರಿಗೆ,ಮತ್ತೊಂದು ಭಾಗ ಬಡವರಿಗೆ ಎಂದು ವಿಂಗಡಿಸುವ ಕೆಲಸನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆದೇಶ ಬಿಟ್ಟು ಹೋಗಿರುವ ಶ್ರೀಮಂತರನ್ನು ಜೈಲಿಗೆ ಹಾಲಿದೆಎಂದು ಎಚ್ಚರಿಕೆ ನೀಡಿದರು.

       ರಾಜ್ಯ ಸರ್ಕಾರ ರೈತರ 11 ಸಾವಿರ ಕೋಟಿ ರೂ ಮೊತ್ತದಸಾಲ ಮನ್ನಾ ಮಾಡಿದೆ. ಮಧ್ಯಪ್ರದೇಶ, ಛತ್ತಿಸಗಡ,ರಾಜಸ್ತಾನದಲ್ಲಿ ಸಾಲಮನ್ನಾ ಮಾಡಿ ಸಾಬೀತುಪಡಿಸಿದ್ದೇವೆ.ಆದರೆ ಇದನ್ನು ನರೇಂದ್ರ ಮೋದಿ ಲಾಲಿಪಾಪ್ ಎಂದುಟೀಕಿಸುತ್ತಾರೆ. ಹಾಗಾದರೆ ದೇಶದ ರೈತರ ಸಾಲವನ್ನು ಯಾಕೆಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಬರುವಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ‌ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

       ದೇಶದ ಜನರ ಬಡವರ, ರೈತರ, ಬುಡಕಟ್ಟು ಜನರಜಮೀನುಗಳನ್ನು ವಶಪಡಿಸಿಕೊಳ್ಳುವುದನ್ನು ತಪ್ಪಿಸಲುಯುಪಿಎ ಸರ್ಕಾರ ಹೊಸ ಕಾನೂನು ತಂದಿತ್ತು.ಭೂಸ್ವಾಧೀನಕ್ಕೊಳಪಡುವ ಜಮೀನಿಗೆ ಮಾರುಕಟ್ಟೆಗಿಂತನಾಲ್ಕು ಪಟ್ಟು ದರ ನಿಗದಿಪಡಿಸಬೇಕೆನ್ನುವ ನ್ಯಾಯಯುತಭೂ ಕಾನೂನನ್ನು ಅನುಷ್ಠಾನಕ್ಕೆ ತರಲಾಗಿತ್ತು. ಆದರೆಪ್ರಧಾನಿ ಮೋದಿ ಈ ಕಾನೂನನ್ನು ರದ್ದುಪಡಿಸಲು ಮೂರುಬಾರಿ ಪ್ರಯತ್ನಿಸಿತು. ಆದರೆ ಕಾಂಗ್ರೆಸ್ ತನ್ನ ನಿರ್ಧಾರದಿಂದಒಂದಿಂಚೂ ಸಹ ಅಲುಗಾಡಲಿಲ್ಲ ಎಂದರು.

       ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ಮನ್ರೇಗಾ ಯೋಜನೆಕಾಂಗ್ರೆಸ್ ಆಡಳಿತದ ಪಳಯುಳಕೆ ಎಂದು ಹೇಳುವಮೂಲಕ ಹಾಸ್ಯಮಾಡಿದ್ದರು. ಈಗ ಉದ್ಯೋಗ ಖಾತ್ರಿಯಲ್ಲಿಕೂಲಿಯನ್ನು ಕಸಿದುಕೊಳ್ಳುವ ಕೆಲಸವನನ್ನು ಬಿಜೆಪಿಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

       ಕರ್ನಾಟಕದಿಂದಲೇ ಕಾಂಗ್ರೆಸ್ ಭವಿಷ್ಯ ನಿರ್ಮಾಣವಾಗಿದೆ.ಕರ್ನಾಟಕದಲ್ಲಿ ಆರ್.ಎಸ್.ಎಸ್. ಬಿಜೆಪಿ ಕೋಮುವಾದಸಿದ್ಧಾಂತ ಹಾಗೂ ರೈತರ ದಲಿತರ ಹಿಂದುಳಿದವರಶೋಷಿತರ ಪರ ಕಾಂಗ್ರೆಸ್ ಪಕ್ಷದ ಹೋರಾಟ ಮಾಡುತ್ತಿದೆ.ಕಾಂಗ್ರೆಸ್ ದೇಶದ ಜನರಿಗೆ ಅನ್ಯಾಯವಾಗಲುಬಿಡುವುದಿಲ್ಲ. ರೈತರ ವಿಮೆ ಹಣ ಅಂದಾನಿ ಅಂಬಾನಿಗೆಹೋಗುವುದನ್ನು ಪಕ್ಷ ತಪ್ಪಿಸಲಿದೆ. ಗುಡುಗು, ಸಿಡಿಲು,ಭೂಕಂಪ ಬಂದರೂ ಕಾಂಗ್ರೆಸ್

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap