ರಾಮನಗರ
ವಿಶಾಲವಾದ ಮಾವಿನ ತೋಪು, ಲೌಡ್ ಸ್ಪೀಕರ್,ನೂರಾರು ಯುವಕ ಯುವತಿಯರು ಮತ್ತು ಮದ್ಯದ ಬಾಟಲಿಗಳು. ಇದು ರಾಮನಗರದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ವಿವರಗಳಾದರೆ. ರಾಮನಗರ ಎಸ್ಪಿ ನೇತೃತ್ವದ ಪೊಲೀಸರ ತಂಡ ಅನುಮತಿ ಇಲ್ಲದೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದೆ. ಈ ವೇಳೆ 10 ಜನರನ್ನು ಬಂಧಿಸಲಾಗಿದ್ದು, ಮದ್ಯ, ಕ್ಯಾಮರಾ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ
ಬೆಂಗಳೂರು ಮೂಲದ ವೆಂಕಟೇಶ್ ಎಂಬುವವರಿಗೆ ಸೇರಿದ 32 ಎಕರೆ ವಿಶಾಲ ಮಾವಿನ ತೋಪಿನಲ್ಲಿ ಅನುಮತಿ ಪಡೆಯದೇ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮೊಬೈಲ್ ಅಪ್ಲಿಕೇಶನ್ ಮೂಲಕ ರೇವ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಯುವಕ/ಯುವತಿಯರಿಂದ ಹಣ ಸಂಗ್ರಹ ಮಾಡಲಾಗಿತ್ತು.
ಶನಿವಾರ ತಡರಾತ್ರಿ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮಾವಿನ ತೋಪಿನ ಮಧ್ಯೆ ಶಾಮಿಯಾನ ಹಾಕಿ, ಡಿಜೆ ಹಾಕಿಕೊಂಡು ರೇವ್ ಪಾರ್ಟಿ ಮಾಡಲಾಗುತ್ತಿತ್ತು.ಈ ರೇವ್ ಪಾರ್ಟಿಯಲ್ಲಿ ಬೆಂಗಳೂರು ಮಾತ್ರವಲ್ಲದೇ ಕೇರಳ ರಾಜ್ಯದ ಯುವಕ/ಯುವತಿಯರು ಪಾಲ್ಗೊಂಡಿದ್ದರು.ಬೆಂಗಳೂರಿನ ಮಧುಮಿತ ರೇವ್ ಪಾರ್ಟಿ ಆಯೋಜನೆ ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/12/rave-party.gif)