ಮೈಸೂರು-ಬೆಂಗಳೂರು ನಡುವೆ 1000 ಮಂದಿ ವಿಮಾನ ಪ್ರಯಾಣ.!

ಮೈಸೂರು

    ಒಂದೇ ತಿಂಗಳಿನಲ್ಲಿ ಮೈಸೂರು-ಬೆಂಗಳೂರು ನಡುವೆ ಸಾವಿರಕ್ಕೂ ಹೆಚ್ಚು ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಏರ್ ಇಂಡಿಯಾ ಅಂಗ ಸಂಸ್ಥೆ ಅಲೆಯನ್ಸ್ ಏರ್ ಜೂನ್ 7 ರಿಂದ ಉಡಾನ್ ವಿಮಾನ ಸೇವೆಯನ್ನು ಆರಂಭಿಸಿದ್ದು, ಈ ಎರಡು ನಗರಗಳ ನಡುವೆ ಸಾವಿರಕ್ಕೂ ಹೆಚ್ಚು ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

   ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಎವಿಯೇಷನ್ ಅಂಕಿ-ಅಂಶಗಳ ಪ್ರಕಾರ ಬೆಂಗಳೂರಿನಿಂದ 605 ಮತ್ತು ಮೈಸೂರಿನಿಂದ 581 ಪ್ರಯಾಣಿಕರು ವಿಮಾನದಲ್ಲಿ ಮೈಸೂರು-ಬೆಂಗಳೂರು ಪ್ರಯಾಣಿಸಿದ್ದಾರೆ. ಮಂಗಳವಾರ ಮತ್ತು ಬುಧವಾರವನ್ನು ಹೊರತುಪಡಿಸಿ ವಾರದಲ್ಲಿ ಐದು ದಿನಗಳು 70 ಆಸನಗಳ ಅಲೆಯನ್ಸ್ ಏರ್ ಈ ಎರಡು ನಗರಗಳ ನಡುವೆ ಕಾರ್ಯನಿರ್ವಹಿಸಿದೆ.

    ಜೂನ್ ತಿಂಗಳಿನಲ್ಲಿ 3446 ಪ್ರಯಾಣಿಕರು ಚೆನ್ನೈ-ಮೈಸೂರು ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದರೆ 174 ಮಂದಿ ಪ್ರಯಾಣಿಕರು ವಿಜಯವಾಡಕ್ಕೆ 103 ಪ್ರಯಾಣಿಕರು ಮೈಸೂರಿನಿಂದ ವಿಶಾಖಪಟ್ಟಣಂಗೆ ಪ್ರಯಾಣಿಸಿದ್ದಾರೆ.2017ರಿಂದ ಮೈಸೂರು ಮತ್ತು ಚೆನ್ನೈ ನಡುವೆ ಮಾತ್ರ ವಿಮಾನ ಸಂಚರಿಸಲಾಗಿತ್ತು. ಆದರೆ ಇದೀಗ ಕೇಂದ್ರದ ಉಡಾನ್-3 ಯೋಜನೆಯಂತೆ ಮೈಸೂರು ಹಾಗೂ ಬೆಂಗಳೂರು, ವಿಜಯವಾಡ- ವೈಜಾಗ್ ನಡುವೆ ವಿಮಾನಯಾನ ಆರಂಭವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap