ಮುಂದಿನ ವರ್ಷ 10 ಸಾವಿರ ಪ್ರಧಾನಮಂತ್ರಿ ಜನ್ ಔಷಧಿ ಕೇಂದ್ರಗಳ ಸ್ಥಾಪನೆ

ಬೆಂಗಳೂರು

          ದೇಶದಲ್ಲಿ ಮುಂದಿನ ವರ್ಷ ೧೦ ಸಾವಿರ ಪ್ರಧಾನಮಂತ್ರಿ ಜನ್ ಔಷಧಿ ಕೇಂದ್ರಗಳನ್ನು ಆರಂಭಿಸುವುದಾಗಿ ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವ ಆಶ್ವಿನ್ ಕುಮಾರ್ ಚೌಬೆ ಹೇಳಿದ್ದಾರೆ. ಮೈಸೂರಿನಲ್ಲಿ ಪ್ರಧಾನಮಂತ್ರಿ ಜನ್ ಔಷಧಿ ಮಳಿಗೆ ಉದ್ಘಾಟನೆ ಬಳಿಕ ಅವರು ಈ ವಿಷಯ ತಿಳಿಸಿದರು.

           ಪ್ರಸುತ್ತ ದೇಶದಲ್ಲಿ ೪ ಸಾವಿರದ ೯೦೦ ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದೆ. ಇದರಿಂದ ಬಡವರಿಗೆ ಗುಣಮಟ್ಟದ ಔಷಧಿಗಳು ಕೈಗೆಟ್ಟುಕುವ ಬೆಲೆಯಲ್ಲಿ ದೊರೆಯುತ್ತಿದ್ದು, ವಾರ್ಷಿಕ ೧೦ ಸಾವಿರ ಕೋಟಿ ರೂಪಾಯಿಗಳು ಬಡವರಿಗೆ ಉಳಿತಾಯವಾಗುತ್ತಿದೆ ಎಂದರು. ಕೇಂದ್ರ ಸರ್ಕಾರ ಬಡವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಇದಕ್ಕಾಗಿಯೇ ಆಯುಷ್ಮಾನ್ ಭಾರತ್ ಎಂಬ, ವಿಶ್ವದ ಅತಿ ದೊಡ್ಡ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ ಇದಲ್ಲದೇ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಬಡವರು ಮತ್ತು ಕಾರ್ಮಿಕರ ಆರೋಗ್ಯ ಸುಧಾರಿಸಲು ಹೆಚ್ಚಿನ ಹಣ ಮೀಸಲಿಟ್ಟಿದೆ ಎಂದು ಕೇಂದ್ರ ಸಚಿವರು ಹೇಳಿದರು. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap