ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಹಂದನಕೆರೆ ಹೋಬಳಿ ಡಗ್ಗೇನಹಳ್ಳಿ ಗ್ರಾಮದ ಸರ್ವೆ ನಂ. 28ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ ಎಂದು ಹಂದನಕೆರೆ ಪೊಲೀಸ್ ಮೋಹನ್ ಹಾಗೂ ಕಿರಣ್ ಬೀಟ್ ಹೋದಾಗ ಖಚಿತಪಡಿಸಿಕೊಂಡು ಸಿ.ಪಿ.ಐ ಎ.ಸುರೇಶ್ರವರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಸಿ.ಪಿ.ಐ ಎ.ಸುರೇಶ್ ಹಾಗೂ ಹಂದನಕೆರೆ ಪಿ.ಎಸ್.ಐ ನರಸಿಂಹಮೂರ್ತಿ ಪರಿಶೀಲಿಸಿ 12.7 ಕೆಜಿ ಗಾಂಜಾ ವಶಪಡಿಸಿಕೊಂಡು ಆರೋಪಿ ಮಂಜುನಾಥನನ್ನು ಬಂಧಿಸಿದ್ದಾರೆ. ನಂತರ ಮತಿಘಟ್ಟ ಡಾ||ಹಿಮಶ್ವೇತ ಹಾಗೂ ಉಪತಹಸೀಲ್ದಾರ್ ಪ್ರಕಾಶ್ ಸಮ್ಮುಖದಲ್ಲಿ ಪಂಚನಾಮ ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಈ ಸಂದರ್ಭದಲ್ಲಿ ಸಿ.ಪಿ.ಐ ಎ.ಸುರೇಶ್, ಡಾ||ಹಿಮಶ್ವೇತ, ಹಾಗೂ ಉಪತಹಸೀಲ್ದಾರ್ ಪ್ರಕಾಶ್, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
