13 ಕೆಎಸ್​ಆರ್​​ಪಿ ಸಿಬ್ಬಂದಿಗೆ ಸದ್ಯ ಕೊರೊನಾ ದೃಢ..!

ಬೆಂಗಳೂರು:

   ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಜಾಸ್ತಿಯಾಗ್ತಿದೆ. ಹೀಗಾಗಿ ಕಂಟೈನ್ಮೆಂಟ್ ಝೋನ್​ಗಳಲ್ಲಿ ಬಹಳಷ್ಟು ಮುಂಜಾಗ್ರ ಕ್ರಮವನ್ನು ಪೊಲೀಸರು ಕೈಗೊಳ್ತಿದ್ರು. ಆದ್ರೆ ಪೊಲೀಸ್ ಇಲಾಖೆಗೆ ಪಾದರಾಯನಪುರದ ನಂಜು ಕಾಡುತ್ತಿದೆ.

 
    ಪಾದಾರಯನಪುರದಲ್ಲಿ ಕರ್ತವ್ಯ ಮುಗಿಸಿ ಮತ್ತೆ ಮೈಸೂರಿಗೆ ಹೋಗಿ ಕೊರೊನಾ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ದೃಢವಾಗಿದೆ. ಈಗಾಗ್ಲೇ ಬೆಂಗಳೂರಿನ ಕೆಎಸ್ಆರ್​ಪಿ ತುಕಡಿಯವರು ಪಾದರಾಯನಪುರಕ್ಕೆ ತೆರಳಿ ಕಾರ್ಯನಿರ್ವಹಿಸಿದ್ದಾಗ ಕೊರೊನಾ ದೃಢವಾಗಿದ್ದು, ಪಾದಾರಯನಪುರಕ್ಕೆ ತೆರಳಿದ ಒಟ್ಟು 20 ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ.
      ಸದ್ಯ ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಇಲಾಖೆಯ ಎಲ್ಲಾ ಸಿಬ್ಬಂದಿಗೆ ಅತಿ ಜಾಗೃತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಕೆಎಸ್ಆರ್​ಪಿ ಸಿಬ್ಬಂದಿ ಕೆಎಸ್ಆರ್​ಪಿ ಬಸ್ಸುಗಳಲ್ಲಿ ಅಹಿತಕರ ಘಟನೆ ಸಂದರ್ಭ, ಬೇರೆ ಬೇರೆ ಕಡೆ ಘಟನಾ ಸ್ಥಳಕ್ಕೆ ತೆರಳಿ ಬಸ್ಸಿನಲ್ಲೇ ವಾಸ್ತವ್ಯ ಮಾಡ್ತಾರೆ. ಹಾಗಾಗಿ ಕೆಎಸ್ಆರ್​ಪಿ ಸಿಬ್ಬಂದಿಗೂ ಕೊರೊನಾ ಆತಂಕ ಶುರುವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap