ತುಮಕೂರು
ಸೋಮವಾರ ಜಿಲ್ಲೆಯಲ್ಲಿ ಮತ್ತೆ 165 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 4408ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಸೋಮವಾರ 165 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 3254 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 1015 ಸೋಂಕು ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಮತ್ತೆ ಐದು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ತುಮಕೂರಿನ ಎಸ್ಎಸ್ ಪುರಂನ 53 ವರ್ಷದ ಗಂಡಸು ಸೋಂಕು ತಗುಲಿ ಅಸುನೀಗಿದ್ದಾರೆ. ಇವರು ಜ್ವರ, ಕೆಮ್ಮಿನ ತೊಂದರೆಯಿಂದ ಬಳಲುತ್ತಿದ್ದರು. ಗಂಟಲು ದ್ರವ ಪರೀಕ್ಷೆ ಮಾಡಿದಾಗ ಪಾಸಿಟೀವ್ ವರದಿ ಬಂದಿತ್ತು. ನಗರದ ವಿದ್ಯಾನಗರದ 61 ವರ್ಷದ ಪುರುಷರು ಸೋಂಕು ತಗುಲಿ ಅಸುನೀಗಿದರು.
ತುಮಕೂರು ತಾಲ್ಲೂಕು ಬೊಮ್ಮನಹಳ್ಳಿಯ 43 ವರ್ಷದ ಗಂಡಸು, ತುರುವೇಕೆರೆ ತಾಲ್ಲೂಕಿನ ದೇವನಾಯ್ಕನಹಳ್ಳಿಯ 45 ವರ್ಷದ ಮಹಿಳೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ 70 ವರ್ಷದ ಪುರುಷ ಕೋವಿಡ್ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತರಾದವರ ಸಂಖ್ಯೆ 139ಕ್ಕೆ ಏರಿದೆ. ಇವರಲ್ಲಿ ತುಮಕೂರು ತಾಲ್ಲೂಕಿನ 83 ಜನ ಸೇರಿದ್ದಾರೆ.
ಸೋಮವಾರ ವರದಿಯಾದ 165 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 40, ತಿಪಟೂರು ತಾಲ್ಲೂಕಿನ 26, ಕುಣಿಗಲ್ ತಾಲ್ಲೂಕಿನಲ್ಲಿ 19, ತುರುವೇಕೆರೆ ತಾಲ್ಲೂಕಿನಲ್ಲಿ 19, ಪಾವಗಡ ತಾಲ್ಲೂಕಿನಲ್ಲಿ 15, ಶಿರಾ ತಾಲ್ಲೂಕಿನ 11, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 11, ಗುಬ್ಬಿ ತಾಲ್ಲೂಕಿನಲ್ಲಿ 10, ಮಧುಗಿರಿ ತಾಲ್ಲೂಕಿನ 10, ಕೊರಟಗೆರೆ ತಾಲ್ಲೂಕಿನ 4, ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 72 ಪುರುಷರು, 93 ಮಹಿಳೆಯರು, ಇಬ್ಬರು ಮಕ್ಕಳು, 60 ವರ್ಷ ಮೇಲ್ಪಟ್ಟ 31 ಜನರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 4408 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 1649, ಕುಣಿಗಲ್ ತಾ. 423, ಪಾವಗಡ ತಾ. 383, ತಿಪಟೂರು ತಾ. 343, ಮಧುಗಿರಿ ತಾ. 322, ಶಿರಾ ತಾ. 294, ಗುಬ್ಬಿ ತಾ. 280, ತುರುವೇಕೆರೆ ತಾ. 249, ಕೊರಟಗೆರೆ ತಾ. 241, ಚಿಕ್ಕನಾಯಕನಹಳ್ಳಿ ತಾ. 224 ಪ್ರಕರಣ ವರದಿಯಾಗಿವೆ.
ಈವರೆಗೂ ಕೊರೊನಾ ಸೋಂಕು ತಗುಲಿದ 4408 ಜನರಲ್ಲಿ 139 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 88, ಕುಣಿಗಲ್ ತಾಲ್ಲೂಕಿನಲ್ಲಿ 9, ಗುಬ್ಬಿ ತಾಲ್ಲೂಕಿನಲ್ಲಿ 8, ತಿಪಟೂರು ತಾಲ್ಲೂಕಿನ 6, ಪಾವಗಡ ತಾಲ್ಲೂಕಿನಲ್ಲಿ 6, ಶಿರಾ ತಾಲ್ಲೂಕಿನ 6, ಕೊರಟಗೆರೆ ತಾಲ್ಲೂಕಿನಲ್ಲಿ 5, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4, ತುರುವೇಕೆರೆ ತಾಲ್ಲೂಕು 4, ಮಧುಗಿರಿ ತಾಲ್ಲೂಕಿನಲ್ಲಿ 3 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








