ಸಿಎಂ-ರಾಧಿಕಾ ಫೋಟೋ ಕೋಲಾಜ್ : ಇಬ್ಬರ ಬಂಧನ

ಬೆಂಗಳೂರು:

      ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಧಿಕಾ ಫೋಟೋವನ್ನು ಕೋಲಾಜ್ ಮಾಡಿದ ಆರೋಪ ಸಂಬಂಧ ಇಬ್ಬರು ಪತ್ರಕರ್ತರ ಬಂಧನ ಮಾಡಲಾಗಿದೆ.

      ಸಿಎಂ ಏಪ್ರಿಲ್ 22ರಂದು ಪ್ರಕೃತಿ ಚಿಕಿತ್ಸೆಗೆ ಕಾಪುಗೆ ಆಗಮಿಸಿದ ಕುರಿತು ಎರಡು ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆ ಮೊರೆ ಹೋದ ಸಿಎಂ ಕುಮಾರಸ್ವಾಮಿ ಎಂಬ ಶಿರ್ಷೀಕೆ ಅಡಿ ಸುದ್ದಿ ಪ್ರಕಟವಾಗಿತ್ತು.

        ಇದನ್ನ ಏಪ್ರಿಲ್ 24ರಂದು ವೆಬ್‍ಸೈಟ್‍ವೊಂದು ಸಿಎಂ ಹಳೆ ಫೋಟೋಗಳನ್ನ ತಿದ್ದುಪಡಿ ಮಾಡಿ,ರಾಧಿಕಾ ಜೊತೆ ಉಡುಪಿ ರೆಸಾರ್ಟ್‍ಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಎಂಬ ಶೀರ್ಷಿಕೆ ಅಡಿ ಸುದ್ದಿಯನ್ನ ಪ್ರಕಟನೆ ಮಾಡಿತ್ತು ಎಂಬ ಆರೋಪವನ್ನ ದೂರಿನಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ.ಇದೇ ವೇಳೆ ಫೇಸ್ ಬುಕ್‍ಫೋಸ್ಟ್ ಮಾಡಿದ್ದ ಇಬ್ಬರನ್ನು ಬಂಧಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿತ್ತು.

       ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಪೊಲೀಸ್ ಆಯುಕ್ತ ಸುನಿಲ್‍ಕುಮಾರ್, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap