ಮಂಗಳೂರು
ಪಕ್ಕದ ಮನೆಯ ಆವರಣ ಗೋಡೆ ಕುಸಿದು ಮೈಮೇಲೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಕರುಣಾಜನಕ ಘಟನೆ ಮಂಗಳೂರಿನ ಪಡೀಲ್ ಸಮೀಪದ ಶಿವನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ರಾಮಚಂದ್ರ ಹಾಗೂ ರಜನಿ ದಂಪತಿಗಳ ಮಕ್ಕಳಾದ ವೇದಾಂತ್ ( 7 )ಮತ್ತು ವರ್ಷಿಣಿ ( 8 ) ಮೃತಪಟ್ಟ ಮಕ್ಕಳು.
ಇಂದು ಸಂಜೆಯಿಂದ ನಗರದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. . ಭಾರೀ ಮಳೆಗೆ 20 ಅಡಿ ಎತ್ತರದ ಈ ಆವರಣ ಗೋಡೆ ಕುಸಿದಿದೆ. ಈ ವೇಳೆ ಮಕ್ಕಳು ಮನೆಯೊಳಗಡೆ ಓದುತ್ತಿದ್ದರು.
ದುರ್ಘಟನೆ ನಡೆಯುವಾಗ ತಂದೆ ತಾಯಿ ಮನೆಯ ಹೊರಗಿದ್ದರು ಎನ್ನಲಾಗಿದೆ. ದುರ್ಘಟನೆಯ ಬಳಿಕ ಗಂಭೀರ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮಕ್ಕಳು ಮೃತಪಟ್ಟರು. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
