ಜಗಳೂರು:
ಕಣದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ತೆನೆ, ಶೇಂಗಾ ಕಾಯಿ ಬಳ್ಳಿಯ 20ಕ್ಕೂ ಹೆಚ್ಚು ಬಣವೆಗಳಿಗೆ ಬೆಂಕಿ ತಗಲಿ ಲಕ್ಷಾಂತರ ರೂಗಳು ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ನಡೆದಿದೆ.
ಹಳ್ಳಪ್ಪರು ಹಾಲಪ್ಪ, ಗೌಡ್ರು ಚಂದ್ರಪ್ಪ, ಗೌಡ್ರು ಮಂಜುನಾಥ್, ಕುಂಟ ಬಸಪ್ಪ, ಬೈರಣ್ಣ ಕೊಟ್ರೇಶ್, ಈರಣ್ಣ ಎಂಬುವರ ರೈತರಿಗೆ ಸೇರಿದ ಬಣವೆಗಳಾಗಿವೆ. ಕಣದಲ್ಲಿ ದಾಸ್ತಾನು ಮಾಡಿದ್ದ ಮೆಕ್ಕೆಜೋಳ ತೆನೆ, ಶೇಂಗಾ ಕಾಯಿ ಬಳ್ಳಿಯ ಬಣವೆಗಳಿಗೆ ಸೋಮವಾರ ನಡು ರಾತ್ರಿ ಬೆಂಕಿ ತಗಲಿ ಉರಿಯುತ್ತಿರುವುದನ್ನು ಕಂಡ ಗ್ರಾಮಸ್ಥರು ನಂದಿಲು ಯತ್ನಸಿದ್ದಾರೆ. ಸುದ್ದಿ ತಿಳಿದು ನಾಲ್ಕು ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.
ಸ್ಥಳಕ್ಕೆ ತಹಸೀಲ್ದಾರ್ ಶ್ರೀಧರ್ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ರೈತರಿಗೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ತಾಪಂ ಸದಸ್ಯ ಸಿದ್ದೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಯು.ಜಿ ಶಿವಕುಮಾರ್ ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
