ಪಾವಗಡ
ತಾಲ್ಲೂಕಿನ ರಾಚರ್ಲ್ಲು ಗ್ರಾಮದಲ್ಲಿ ಇಂದು ಬೆಳ್ಳಿಗ್ಗೆ 10:30ರ ಸುಮಾರಿಗೆ ನರಿಯೊಂದು ದಾಳಿ ಮಾಡಿ ಪೂಜಾರ್ ರಾಜಪ್ಪ ಎಂಬುವವರಿಗೆ ಸೇರಿದ ಸುಮಾರು 20 ಕುರಿಗಳನ್ನು ಕೊಂದಿರುವ ಘಟನೆ ವರದಿಯಾಗಿದೆ .
ಕುರಿಗಳನ್ನು ಮೇವಿಗೆ ಹೊಡೆದುಕೊಂಡು ಹೋದ ಸಮಯದಲ್ಲಿ ಹಟ್ಟಿಯಲ್ಲಿ ಇದ್ದ 15 ಕುರಿಮರಿಗಳು ಹಾಗೂ 5 ಕುರಿಗಳ ಮೇಲೆ ದಾಳಿ ಮಾಡಿದ ನರಿ ಅವುಗಳನ್ನು ಸಾಯಿಸಿದೆ ಇದರಿಂದಾಗಿ ನಮಗೆ ಸುಮಾರು 90 ಸಾವಿರದಷ್ಟು ನಷ್ಟವಾಗಿದೆ ಎಂದು ಮಾಲೀಕ ಅಳಲು ತೊಡಿಕೊಂಡಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಇನ್ನು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
