ಕುಣಿಗಲ್
ತಾಲ್ಲೂಕಿನಲ್ಲಿ ರಸ್ತೆಗಳು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸಂಮಿಶ್ರ ಸರ್ಕಾರದಿಂದ200 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ವಿವಿಧ ಕಾಮಗಾರಿಗಳು ನಡೆಯುತ್ತಿವೆ ಎಂದು ಶಾಸಕ ಡಾ. ರಂಗನಾಥ್ ತಿಳಿಸಿದರು.
ತಾಲ್ಲೂಕಿನ ನಾಗಸಂದ್ರದಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಾ, ಈ ಕಾಮಗಾರಿಯು ಮಾಗಡಿಪಾಳ್ಯದಿಂದ ಚಂದ್ರಶೇಖರಪುರ ರಸ್ತೆ ಅಭಿವೃದ್ದಿ ಕೊಪ್ಪ, ಹುಲಿವಾನ, ಚೊಟ್ಟನಹಳ್ಳಿ ಕ್ರಾಸ್ ವರೆಗೂ 9 ಕಿ.ಮೀ ರಸ್ತೆ ಕಾಮಗಾರಿಯನ್ನ ಕೈಗೊಂಡಿದ್ದು,ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಶೇ.60%ರಷ್ಟು ಮಣ್ಣು ರಸ್ತೆಗಳನ್ನ ಗುಣಮಟ್ಟದ ರಸ್ತೆ ಮಾಡಲು ಗಮನ ಹರಿಸಿದ್ದು,
ಈಗಾಗಲೇ ಕ್ಷೇತ್ರಾದ್ಯಂತ 25 ಜನತಾ ದರ್ಶನ, 60 ಆರೋಗ್ಯ ಶಿಬಿರ,30 ಸಾವಿರ ಮನೆಗಳನ್ನ ಭೇಟಿ ಮಾಡಿ ಜನಸಾಮಾನ್ಯರ ಸಮಸ್ಯೆಗಳನ್ನ ಅರಿತಿದ್ದು,ಮತ ನೀಡಿದ ಮತದಾರರ ಋಣ ತೀರಿಸಲು ಪ್ರಾಮಾಣಿಕವಾದ ಕೆಲಸವನ್ನ ಮಾಡುತ್ತಿದ್ದು,ತಾಲ್ಲೂಕಿನ ವಿವಿಧ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರ ಕಳೆದ 8 ತಿಂಗಳಲ್ಲಿ 200 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿ,ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ.ಸಮ್ಮಿಶ್ರ ಸರ್ಕಾರವೂ ರೈತರ,ಸಹಕಾರ ಸಂಘಗಳ 40 ಸಾವಿರ ಕೋಟಿ ಮನ್ನಾ ಮಾಡಿದೆ.
ತಾಲ್ಲೂಕಿನ ಅಭಿವೃದ್ಧಿಗೆ ಈ ಹಿಂದೆ ವೈ.ಕೆ.ರಾಮಯ್ಯ ಶ್ರಮಿಸುತ್ತಿದ್ದ ಹಾದಿಯಲ್ಲಿ ಸಂಸದ ಡಿ.ಕೆ.ಸುರೇಶ್ರವರು ಶ್ರಮಿಸುತ್ತಿದ್ದು, ನಿಮ್ಮೆಲ್ಲರ ಶಕ್ತಿಯಿಂದ ಗ್ರಾಮಗಳ ವಿಕಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದು,ತಾಲ್ಲೂಕಿನ 10 ಜನ ವಿಧವೆ ನಿರ್ಗತಿಕರಿಗೆ ಸ್ವಂತ ಹಣದಲ್ಲಿ ಮನೆ ನಿರ್ಮಿಸಿಕೊಡಲು ಬದ್ದನಾಗಿ,ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕವಾಗಿ ಸಬಲೀಕರಣ ಹೊಂದಲು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ 35 ಲಕ್ಷ ಅನುದಾನ ನೀಡಲಾಗಿದೆ,ತಾಲ್ಲೂಕಿನ ಅನಿಲ ರಹಿತ ಕುಟುಂಬಗಳಿಗೆ 7500 ಅನಿಲ ಭಾಗ್ಯವನ್ನ ನೀಡಿ,60 ವರ್ಷ ತುಂಬಿದ ವೃಧ್ಧರಿಗೆ ಸಂಧ್ಯಾ ಸುರಕ್ಷತೆ ಯೋಜನೆಯಲ್ಲಿ 3000 ವ್ಯಕ್ತಿಗಳಿಗೆ ಸಹಾಯಹಸ್ತ ಚೆಲ್ಲಿದ್ದು, ಅಂಗವಿಕಲರು ಸೇರಿದಂತೆ ಅನೇಕರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತಾಗಬೇಕೆಂದು ಬಯಸಿದರು.
ವಿರೋಧ ಪಕ್ಷದವರು ಒಳ್ಳೆಯ ಆಚಾರ-ವಿಚಾರಗಳನ್ನ ಮೈಗೂಡಿಸಿಕೊಂಡು ಬಡವರ ಪರವಾಗಿ ಧ್ವನಿ ಎತ್ತಿ ಅವರ ಸೇವೆಯನ್ನ ಉತ್ತಮವಾಗಿ ಮಾಡಬೇಕಾಗಿದ್ದು,ಅಗೌರವದಿಂದ ಸಂಸ್ಕøತವಲ್ಲದ ಮಾತುಗಳನ್ನ ನಿಲ್ಲಿಸಬೇಕಾಗಿದೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪಾಪಣ್ಣ,ತಾ.ಪಂ.ಸದಸ್ಯ ರಾಜು, ಮುಖಂಡರಾದ ಜಯಕುಮಾರ್,ಚಂದ್ರಶೆಖರ್,ರಾಜಣ್ಣ, ಮಹದೇವಪ್ಪ, ಕುಮಾರ್, ಇಪ್ಪಾಡಿ ಐ.ಜಿ.ರಮೇಶ್, ಗುತ್ತಿಗೆದಾರ ರಾದರಾಮಲಿಂಗೇಗೌಡ, ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆನಾರಾಯಣ್ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
