ತುಮಕೂರು : 292 ಮಂದಿಗೆ ಪಾಸಿಟಿವ್: 3 ಸಾವು

ತುಮಕೂರು

     ದಿನದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಬುಧವಾರ ಒಂದೇದಿನ ಜಿಲ್ಲೆಯಲ್ಲಿ 292 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 6440ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಮೂವರು ಮೃತಪಟ್ಟಿದ್ದಾರೆ. ಇವರೊಂದಿಗೆ ಸೋಂಕಿನಿಂದ ಮೃತರಾದವರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ.

    ತುಮಕೂರು ನಗರದ ಎಸ್‍ಐಟಿ ಬಡಾವಣೆಯ 35 ವರ್ಷದ ಗಂಡಸು, ಶಾಂತಿ ನಗರದ 62 ವರ್ಷದ ಮಹಿಳೆ ಹಾಗೂ ಕೊರಟಗೆರೆ ತಾಲ್ಲೂಕು ಕೋಳಾಲದ 32 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಜೊತೆಗೆ, ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾಮದ 74 ವರ್ಷದ ಸೊಂಕಿತ ಮಹಿಳೆ ಅನ್ಯ ಕಾರಣದಿಂದ ಅಸುನೀಗಿದ್ದಾರೆ. ಇವರು ಗ್ಯಾಂಗ್ರಿನ್‍ನಿಂದ ಬಳಲುತ್ತಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ಸೋಂಕು ಇರುವುದು ಖಚಿತವಾಗಿತ್ತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.

    ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಬುಧವಾರ 140 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 4515 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 1752 ಸೋಂಕು ಸಕ್ರಿಯ ಪ್ರಕರಣಗಳಿವೆ. ಬುಧವಾರ ವರದಿಯಾದ 292 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 124 ಜನರಿಗೆ ಸೋಂಕು ಖಚಿತವಾಗಿದೆ. ಪಾವಗಡ ತಾಲ್ಲೂಕಿನ 37, ತಿಪಟೂರು ತಾಲ್ಲೂಕಿನ 33, ಶಿರಾ ತಾಲ್ಲೂಕಿನಲ್ಲಿ 32, ಮಧುಗಿರಿ ತಾಲ್ಲೂಕಿನ 20, ತುರುವೇಕೆರೆ ತಾಲ್ಲೂಕಿನಲ್ಲಿ 12, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 10, ಗುಬ್ಬಿ ತಾಲ್ಲೂಕಿನಲ್ಲಿ 10, ಕೊರಟಗೆರೆ ತಾಲ್ಲೂಕಿನ 7, ಕುಣಿಗಲ್ ತಾಲ್ಲೂಕಿನ 7 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 178 ಪುರುಷರು, 114 ಮಹಿಳೆಯರು, 6 ಮಂದಿ ಮಕ್ಕಳು, 60 ವರ್ಷ ಮೇಲ್ಪಟ್ಟ 59 ಜನರಿದ್ದಾರೆ.

    ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 6440 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 2394, ಪಾವಗಡ ತಾ. 559, ಕುಣಿಗಲ್ ತಾ. 529, ತಿಪಟೂರು ತಾ. 516, ಶಿರಾ ತಾ. 470, ಗುಬ್ಬಿ ತಾ. 456, ಮಧುಗಿರಿ ತಾ. 430, ತುರುವೇಕೆರೆ ತಾ. 375, ಚಿಕ್ಕನಾಯಕನಹಳ್ಳಿ ತಾ. 374, ಕೊರಟಗೆರೆ ತಾ. 337 ಪ್ರಕರಣ ವರದಿಯಾಗಿವೆ.

     ಈವರೆಗೂ ಕೊರೊನಾ ಸೋಂಕು ತಗುಲಿದ 6440 ಜನರಲ್ಲಿ 165 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 103, ಕುಣಿಗಲ್ ತಾಲ್ಲೂಕಿನಲ್ಲಿ 10, ಪಾವಗಡ ತಾಲ್ಲೂಕಿನ 9, ಗುಬ್ಬಿ ತಾಲ್ಲೂಕಿನಲ್ಲಿ 9, ತಿಪಟೂರು ತಾಲ್ಲೂಕಿನ 8, ಶಿರಾ ತಾಲ್ಲೂಕಿನ 7, ಕೊರಟಗೆರೆ ತಾಲ್ಲೂಕಿನಲ್ಲಿ 6, ತುರುವೇಕೆರೆ ತಾಲ್ಲೂಕು 5, ಮಧುಗಿರಿ ತಾಲ್ಲೂಕಿನಲ್ಲಿ 4, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ.ಸೋಂಕಿತರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 6440 ಮಂದಿಗೆ ಸೋಂಕು ತಗುಲಿದೆ, ಇವರಲ್ಲಿ 4515 ಮಂದಿ ಗುಣಮುಖರಾಗಿದ್ದಾರೆ..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap