ಕೊಲೆ ಯತ್ನ : ಮೂವರು ಆರೋಪಿತರ  ಬಂಧನ 

ತುಮಕೂರು
       ಊರುಕೆರೆ ಗ್ರಾಮದ ರಾಜಣ್ಣ ರವರ ಹೆಂಡತಿ ಪುಟ್ಟನರಸಮ್ಮ ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತಿದ್ದ ವಿಚಾರದಲ್ಲಿ  ಹಳೇ ದ್ವೇಷದಿಂದ ಅದೇ ಗ್ರಾಮದ ಓ.ಸಿ ಕೃಷ್ಣಪ್ಪ ಮತ್ತು ಅವರ ಕುಟುಂಬದವರು ದ್ವೇಷ ಸಾಧಿಸಿ ಫೆ.24ರಂದು ಬೆಳಿಗ್ಗೆ 6.30 ಕ್ಕೆ ರಾಜಣ್ಣ ರವರು ಯೋಗಾಭ್ಯಾಸಕ್ಕೆ ಹೋಗಲು ಓ.ಸಿ ಕೃಷ್ಣಪ್ಪ ರವರ ಮನೆ ಮುಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಓ.ಸಿ.ಕೃಷ್ಣಪ್ಪನು ತನ್ನ ಕಾರನ್ನು ಮನೆಯಿಂದ ಹಿಂದಕ್ಕೆ ತೆಗೆಯುವಾಗ ರಾಜಣ್ಣ ರವರಿಗೆ ಟಚ್ ಮಾಡಿದ್ದರು.  ಈ ಬಗ್ಗೆ ರಾಜಣ್ಣನು ಪ್ರಶ್ನೆ ಮಾಡಿದ್ದಕ್ಕೆ,  ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯನ್ನು ತೆಗೆದುಕೊಂಡು ಕೊಲೆ ಬೆದರಿಕೆ ಹಾಕಿ ರಾಜಣ್ಣನ ತಲೆಯ ನೆತ್ತಿಗೆ ಹೊಡೆದಿದ್ದನು.
       ಅದೇ ಸಮಯಕ್ಕೆ  ಓ.ಸಿ. ಕೃಷ್ಣಪ್ಪ ನವರ ಮಗ ಪುರುಷೋತ್ತಮನು ರಾಜಣ್ಣನ ಕುತ್ತಿಗೆಯನ್ನು ಹಿಸುಕಿ ಮೈ ಕೈಗೆ ಹೊಡೆದಿದ್ದು, ಓ.ಸಿ ಕೃಷ್ಣಪ್ಪನ ತಮ್ಮಂದಿರಾದ ಜಗದೀಶ ಬಿನ್ ಚಿಕ್ಕರಂಗಯ್ಯ, ಮಂಜುನಾಥ ಬಿನ್ ಚಿಕ್ಕರಂಗಯ್ಯ, ಜಯಣ್ಣ ಬಿನ್ ಶ್ರೀರಂಗಯ್ಯ, ಶ್ರೀರಂಗಯ್ಯ ಬಿನ್ ಚಿಕ್ಕರಂಗಯ್ಯ, ಅಕ್ಷಯ ಬಿನ್ ಜಗದೀಶ್, ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ತಮ್ಮ ಕೈಯಲ್ಲಿ ಹರಿತವಾದ ಆಯುಧಗಳಾದ ಲಾಂಗ್, ದೊಣ್ಣೆಗಳನ್ನು ಹಿಡಿದುಕೊಂಡು ಬಂದರು.
      ರಾಜಣ್ಣ, ರಾಜಣ್ಣನ ಮಗ ಸುನೀಲ್ ಕುಮಾರ್ ಅವರ ಹೆಂಡತಿ ಪುಟ್ಟನರಸಮ್ಮ ರಾಜಣ್ಣ ರವರ ತಮ್ಮ ರಂಗಯ್ಯ ಮತ್ತು ಅವರ ಸಂಬಂದಿ ಶ್ರೀನಿವಾಸ್ ಎಂಬುವವರ ಮೇಲೆ ಲಾಂಗ್ ಮತ್ತು ದೊಣ್ಣೆಯಿಂದ ಹೊಡೆದಿದ್ದು. ಈ ಬಗ್ಗೆ ರಾಜಣ್ಣರವರು ನೀಡಿದ ದೂರನ್ನು ಪಡೆದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕೆಳಕಂಡ ಆರೋಪಿಗಳನ್ನು ಬಂಧಿಸಲಾಗಿದೆ. 
ಆರೋಪಿತರ ವಿವರ 
    1) ಓ.ಸಿ ಕೃಷ್ಣಪ್ಪ ಬಿನ್ ಲೇಟ್ ಚಿಕ್ಕರಂಗಯ್ಯ, ಊರುಕೆರೆ. 2) ಜಗದೀಶ ಹೆಚ್. ಬಿನ್ ಲೇಟ್ ಚಿಕ್ಕರಂಗಯ್ಯ, ಊರುಕೆರೆ. 3) ಪುರುಶೋತ್ತಮ ಬಿನ್ ಓ.ಸಿ ಕೃಷ್ಣಪ್ಪ ಊರುಕೆರೆ.
       ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು  ಹಾಗೂ ತಿಪ್ಪೇಸ್ವಾಮಿ ಪೊಲೀಸ್ ಉಪಾಧೀಕ್ಷಕರು, ತುಮಕೂರು ನಗರ ಉಪವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಟಿ.ಸಿ ರಾಮಕೃಷ್ಣಯ್ಯ ಸಿ.ಪಿ.ಐ. ರವರ ನೇತೃತ್ವದ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap