ಗಲಭೆ ಪ್ರಕರಣ: ಮತ್ತೆ 57 ಆರೋಪಿಗಳ ಬಂಧನ

ಬೆಂಗಳೂರು

    ಇತ್ತೀಚೆಗೆ ನಡೆದ ಕೆ.ಜಿ ಹಳ್ಳಿ,‌ ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರನೇ ಸುತ್ತಿನ ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರ ತಡರಾತ್ರಿ ಸಿಸಿಬಿ ಪೊಲೀಸರು ಹೆಗ್ಗಡೆ ನಗರದ ಸೋಷಿಯಲ್​​ ಡೆಮಾಕ್ರಟಿಕ್​​​​ ಪಾರ್ಟಿ ಆಫ್​​ ಇಂಡಿಯಾ(ಎಸ್​​ಡಿಪಿಐ) ಕಚೇರಿಯಲ್ಲಿ ಅಡಗಿ ಕುಳಿತಿದ್ದ 8 ಆರೋಪಿಗಳನ್ನು ಮಾರಾಕಾಸ್ತ್ರಗಳ ಸಮೇತ ಬಂಧಿಸಿದ್ದಾರೆ.

     ಈ ವೇಳೆ ಬಂಧಿತರ ಬಳಿ ಇದ್ದ ಕಬ್ಬಿಣದ ರಾಡ್, ಬ್ಯಾಟ್​ಗಳು, ಇತರೆ ಆಯುಧಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ .ಸಿಸಿಬಿ, ಡಿಜೆ ಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೆಗ್ಗಡೆ ನಗರದ ಎಸ್​​ಡಿಪಿಯ ಕಚೇರಿಯಲ್ಲಿದ್ದ 8 ಜನ ಸೇರಿ 57 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap