ತಿಪಟೂರು :
ತಾಲೂಕಿನ ಕಸಬಾ ಹೋಬಳಿ ಮಡೆನೂರುಗೇಟ್ ಬಳಿ ಇಸ್ಪೀಟ್ ಆಡುತ್ತಿದ್ದಾರೆಂಬ ಖಚಿತಮಾಹಿತಿಯನ್ನು ಆಧರಿಸಿ ಭಾನುವಾರ ರಾತ್ರಿ9.45ರ ಸಮಯದಲ್ಲಿ ಡಿ.ವೈ.ಎಸ್ಪಿ ನೇತೃತ್ವದಲ್ಲಿ ದಾಳಿಮಾಡಿ 6 ಜನರನ್ನು ಬಂಧಿಸಿ ಅವರಿಂದ 10,560 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ಮಡೆನೂರು ಗೇಟ್ ಬಳಿಯ ಬಸವೇಶ್ವರ ಕಾಲೇಜ್ ಹಿಂಭಾಗದಲ್ಲಿ ಕೆಲವರು ಕ್ಯಾಂಡಲ್ ಲೈಟ್ ಬೆಳಕಿನಲ್ಲಿ ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಆಟ ಆಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.ಗ್ರಾಮಾಂತರ ಪೊಲೀಸ್ ಹಾಗೂ ಡಿ.ವೈ.ಎಸ್ಪಿ ಸ್ಥಳಕ್ಕೆ ತೆರಳಿ ದಾಳಿ ಮಾಡಿ, ಸಂತೋಷ (45), ಮೋಹನ್ಕುಮಾರ್ (49),ಆರ್.ಮೋಹನ್ ಪಟೇಲ್ (44) ಸಂಗಮೇಶ್ (45),ಎಲ್. ಎನ್ ಉಮೇಶ (55), ಅನಿಲ್ (35) ಈ ಆರುಜನರನ್ನು ಸ್ಥಳದಲ್ಲಿ ಪೊಲೀಸರುವಶಕ್ಕೆ ಪಡೆದಿದ್ದಾರೆಇವರ ವಿರುದ್ಧ 87 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ.ದಾಳಿಯ ಸಂದರ್ಭದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐಉಮೇಶ್, ಮುಖ್ಯಪೇದೆ ನಾಗೇಶ್, ರವಿಕುಮಾರ್, ವಿಜಯಕುಮಾರ್, ಓಂಕಾರ್ ಸ್ವಾಮಿ ಮೋಹನ್, ಶಾಂತಕುಮಾರ್, ಚೇತನ್, ರಂಗಸ್ವಾಮಿ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/06/Arrest.jpg)