ಅಧಿಕ ಲಾಭಾಂಶದ ಆಸೆ ಹುಟ್ಟಿಸಿ ಸುಮಾರು 60 ಕೋಟಿ ರೂಗಳ ವಂಚನೆ

ಬೆಂಗಳೂರು

       ತಿಂಗಳಿಗೆ ಅಧಿಕ ಲಾಭಾಂಶದ ಆಸೆ ಹುಟ್ಟಿಸಿ ಸುಮಾರು 60 ಕೋಟಿ ರೂಗಳ ವಂಚನೆ ನಡೆಸಿದ್ದ ಎಐಎಂಎಂಎಸ್ ವೆಂಚರ್ಸ್ ಕಂಪನಿಯ ಐವರು ಖತರ್ನಾಕ್ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

        ಜಯನಗರದ ಆಯೂಬ್ ಅಲಿ ಖಾನ್(41)ಇಲಿಯಾಸ್ ಪಾಷ(40) ಮೊಹಮದ್ ಮುಜಾಹಿದ್ದುಲ್ಲಾ(41)ಮುದಾಸಿರ್ ಪಾಷ(35)ಹಾಗೂ ಮೊಹಮದ್ ಶಾಹೀದ್ (35)ಬಂಧೀತ ಆರೋಪಿಗಳಾಗಿದ್ದಾರೆ. ಎಂದು ಡಿಸಿಪಿ ಗಿರೀಶ್ ಎಸ್ ತಿಳಿಸಿದ್ದಾರೆ.
ಜಯನಗರ 9ನೇ ಬ್ಲಾಕ್‍ನಲ್ಲಿ ಎಐಎಂಎಂಎಸ್ ವೆಂಚರ್ಸ್ ಕಂಪನಿಯ ಕಚೇರಿ ತೆರೆದು ಹಣ ಹೂಡಿದರೆ ಮಾಸಿಕ ಶೇ.3ರಿಂದ5 ರಷ್ಟು ಲಾಭಾಂಶದ ಹಣ ನೀಡುವ ಭರವಸೆ ನೀಡಿ 500ಕ್ಕೂ ಹೆಚ್ಚು ಮಂದಿ ಗ್ರಾಹಕರಿಂದ ಸುಮಾರು 65 ಕೋಟಿಗಳಷ್ಟು ಹಣವನ್ನು ಹೂಡಿಕೆ ಮಾಡಿಕೊಳ್ಳಲಾಗಿತ್ತು.

        ಪ್ರಾರಂಭದಲ್ಲಿ ಜನರಿಗೆ ಲಾಭಾಂಶವನ್ನು ನೀಡಿ ನಂತರ ಯಾವುದೇ ಲಾಭಾಂಶ ಹಾಗೂ ಅಸಲು ಹಣವನ್ನು ನೀಡದೆ ವಂಚನೆ ನಡೆಸಿದ್ದು ಈ ಸಂಬಂಧ ಬಂದ ದೂರುಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಳೀಸರು ಕಂಪನಿಯ ಕಚೇರಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

        ಆರೋಪಿಗಳ ವಿರುದ್ಧ ತಿಲಕ್‍ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link