ಚಿತ್ರದುರ್ಗ;
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಜಿಲ್ಲೆಯ 7 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಚಳ್ಳಕೆರೆ ತಾ: ದೇವರಮರಿಕುಂಟೆಯ ಮರಿಕುಂಟೆತಿಪ್ಪಣ್ಣ, ಯಕ್ಷಗಾನಕ್ಷೇತ್ರದಲ್ಲಿ ಹಿರಿಯೂರುತಾ: ಧರ್ಮಪುರ ಹೋಬಳಿ ಹೊಸಹಳ್ಳಿಯ ಹೆಚ್.ಎನ್.ವೀರಪ್ಪ, ಜಾನಪದಕ್ಷೇತ್ರದಲ್ಲಿ ಹಿರಿಯೂರುತಾ: ಅಡವಿರಾಮಜೋಗಿಹಳ್ಳಿಯ ಗಂಗಮ್ಮ, ಸಮಾಜ ಸೇವೆಯಲ್ಲಿಚಿತ್ರದುರ್ಗದ ಎ.ಬಿ.ಸಿ. ಬುಕ್ ಸೆಂಟರ್ನಅನ್ವರ್ ಪಾಶಾ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಚಿತ್ರದುರ್ಗದ ಜಿ.ಹೆಚ್.ಆರ್.ಲೇಔಟ್ನ ಕ.ಮಾ.ರವಿಶಂಕರ್, ಕೃಷಿ ಕ್ಷೇತ್ರದಲ್ಲಿ ಹಿರಿಯೂರು ತಾ: ಧರ್ಮಪುರ ಹೋಬಳಿ ಮ್ಯಾದಲ ಹೊಳೆಯ ಎಂ.ಹೆಚ್.ಷಣ್ಮುಖಪ್ಪ ಮತ್ತು ವೈದ್ಯಕೀಯಕ್ಷೇತ್ರದಲ್ಲಿ ಮೊಳಕಾಲ್ಮೂರು ತಾ: ಕೊಂಡ್ಲಹಳ್ಳಿಯ ಡಾ: ನಾಗರಾಜ್ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಿಮಿತ್ಯ ಏರ್ಪಡಿಸಿದ್ದ ಸಾಂಸ್ಕತಿಕ ಕಾರ್ಯಕ್ರಮಗಳ ಪೈಕಿ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಶಾಲೆಯ ವಿದ್ಯಾರ್ಥಿಗಳು ಹೊಯ್ಸಳ ಚಕ್ರವರ್ತಿಕುರಿತರೂಪಕಆಕರ್ಷಕವಾಗಿ ಮೂಡಿ ಬಂದಿತು.ಸಿರಿಗೆರೆಯ ನೀಲಾಂಬಿಕೆ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಡೊಳ್ಳು ಕುಣಿತಜನರ ಮನಸೂರೆಗೊಂಡಿತು.ನಗರದಕೋಟೆ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ನಡೆಸಿಕೊಟ್ಟ ಕನ್ನಡ ಭಾಷಾಭಿಮಾನ ಬಿಂಬಿಸುವ ವಿವಿಧ ಹಾಡುಗಳ ತುಣುಕುಗಳನ್ನೊಳಗೊಂಡ ನೃತ್ಯ ಪ್ರದರ್ಶನ ಮೆಚ್ಚುಗೆ ಪಡೆದುಕೊಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
